Urdu   /   English   /   Nawayathi

ಬಾಲ್ಕನಿಯಲ್ಲಿ ಮಲಗಿದ ವ್ಯಕ್ತಿ ಮೇಲೆ ಚಿರತೆ ದಾಳಿ: ವ್ಯಕ್ತಿ ಬಲಿ

share with us

ಉದಯಪುರ್( ರಾಜಸ್ಥಾನ): 25 ಜುಲೈ 2019 (ಫಿಕ್ರೋಖಬರ್ ಸುದ್ದಿ) 40 ವರ್ಷದ ವ್ಯಕ್ತಿಯೊಬ್ಬನನ್ನು ಚಿರತೆ ಕೊಂದು ಹಾಕಿದ ಘಟನೆ ರಾಜಸ್ಥಾನದ ಬಾರಾ ಬಾಂಗ್ಲಾ ಘಾಟ್​ ಗ್ರಾಮದಲ್ಲಿ ನಡೆದಿದೆ. ದೇವಿ ಲಾಲ್​ ಮೀನಾ ಎಂಬುವವರು ಬುಧವಾರ ತಮ್ಮ ನಿವಾಸದ ಬಾಲ್ಕನಿಯಲ್ಲಿ ನಿದ್ರೆಗೆ ಜಾರಿದ್ದರು. ಈ ವೇಳೆ ದಾಳಿ ಮಾಡಿದ ಚಿರತೆ ಆತನ ಮೇಲೆ ಎರಗಿ ಎಳೆದೊಯ್ದು ಕೊಂದು ಹಾಕಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೀನಾ ಅವರನ್ನ ಬಾಲ್ಕನಿಯಿಂದ ಎಳೆದೊಯ್ದ ಪರಿಣಾಮ ರಕ್ತ ಚಲ್ಲಾಡಿದ್ದು, ರಕ್ತವನ್ನು ನೋಡಿದ ಗ್ರಾಮಸ್ಥರು ಪೊಲೀಸರಿ​ಗೆ ಮಾಹಿತಿ ನೀಡಿದ್ದರು. ಮೀನಾ ಒಬ್ಬರ ತಮ್ಮ ನಿವಾಸದಲ್ಲಿ ಇರುತ್ತಿದ್ದರು ಎಂಬ ವಿಷಯವೂ ಗೊತ್ತಾಗಿದೆ. ಈ ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಉದಯಪುರ - ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಅರಣ್ಯ ಇಲಾಖೆ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಗ್ರಾಮಸ್ಥರ ಮನ ಒಲಿಸಿ ಪ್ರತಿಭಟನೆ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا