Urdu   /   English   /   Nawayathi

ಪೆಟ್ರೋಲ್ ಹಾಕಿಸುವ ನೆಪದಲ್ಲಿ ಖದೀಮರು​ ಬಂಕ್​ಗೆ ಬಂದ್ರು:​ ಅಲ್ಲಿ ನಡೆದಿದ್ದೇ ಬೇರೆ- ವಿಡಿಯೋ

share with us

ಆಲಿಘಡ್​ (ಉತ್ತರ ಪ್ರದೇಶ): 21 ಜುಲೈ 2019 (ಫಿಕ್ರೋಖಬರ್ ಸುದ್ದಿ) ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಪೆಟ್ರೋಲ್​ ಬಂಕ್​ ಸಿಬ್ಬಂದಿಗೆ ಗನ್ ತೋರಿಸಿ ಬೆದರಿಕೆ ಹಾಕಿ 2,500 ರೂಪಾಯಿ ಕಸಿದುಕೊಂಡು ಪರಾರಿಯಾಗಿದ್ದಾರೆ.

ಪೆಟ್ರೋಲ್​ ಹಾಕಿಸುವ ನೆಪದಲ್ಲಿ ಮೂವರು ಖದೀಮರು ಬೈಕ್​ನಲ್ಲಿ ಬಂದಿದ್ದರು. ಬೈಕ್​ನ ಹಿಂಭಾಗ ಕುಳಿತಿದ್ದ ವ್ಯಕ್ತಿ ತನ್ನ ಬಳಿ ಇದ್ದ ಗನ್​ ತೋರಿಸಿ ಪೆಟ್ರೋಲ್​ ಬಂಕ್​ ಸಿಬ್ಬಂದಿಯನ್ನ ಬೆದರಿಸಿದ್ದಾನೆ. ಅಲ್ಲದೆ, ಸಿಬ್ಬಂದಿಯ ಜೇಬಿಗೆ ಕೈ ಹಾಕಿ 2,500 ರೂಪಾಯಿ ಕಿತ್ತುಕೊಂಡಿದ್ದಾನೆ. ಬಳಿಕ ಸ್ಥಳದಿಂದ ಮೂವರು ದರೋಡೆಕೋರರು ಬೈಕ್ ಏರಿ​ ಪರಾರಿಯಾಗಿದ್ದಾರೆ ಎಂದು ಆಲಿಘಡ್​ ಎಸ್​ಪಿ ಅಭಿಷೇಕ್ ಮಾಹಿತಿ ನೀಡಿದ್ದಾರೆ. ಈ ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆದಷ್ಟು ಶೀಘ್ರದಲ್ಲೇ ಆರೋಪಿಗಳನ್ನ ಬಂಧಿಸುತ್ತೇವೆ ಎಂದು ಎಸ್​ಪಿ ತಿಳಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا