Urdu   /   English   /   Nawayathi

ಸುಪ್ರೀಂಕೋರ್ಟ್​​ ಸ್ಪೀಕರ್​ ಘನತೆ ಎತ್ತಿ ಹಿಡಿದಿದೆ: ಅಭಿಷೇಕ್ ಮನು ಸಿಂಘ್ವಿ

share with us

ನವದೆಹಲಿ: 17 ಜುಲೈ 2019 (ಫಿಕ್ರೋಖಬರ್ ಸುದ್ದಿ) ಕರ್ನಾಟಕದ 15 ಶಾಸಕರು ರಾಜೀನಾಮೆ ಅಂಗೀಕರಿಸುವಂತೆ ಸ್ಪೀಕರ್​ಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ನ ಮೂವರು ಸದಸ್ಯರ ಪೀಠ ಸ್ಪೀಕರ್​ ಸಾರ್ವಬೌಮ್ಯತೆಯನ್ನ ಎತ್ತಿ ಹಿಡಿದಿದೆ ಎಂದು ಸ್ಪೀಕರ್​ ಪರ ವಾದ ಮಂಡನೆ ಮಾಡಿದ ಅಭಿಷೇಕ್​ ಮನು ಸಿಂಘ್ವಿ ಹೇಳಿದ್ದಾರೆ. ಈ ತೀರ್ಪಿನ ಬಗ್ಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ತಾನು ಮಧ್ಯಸ್ಥಿಕೆ ವಹಿಸುವುದಿಲ್ಲವೆಂದು ಹೇಳಿರುವ ಸುಪ್ರೀಂಕೋರ್ಟ್​​ ಸ್ಪೀಕರ್ ಹುದ್ದೆಯ ಘನತೆ ಎತ್ತಿ ಹಿಡಿದಿದೆ. ಸುಪ್ರೀಂ ಕೋರ್ಟ್​ನ ಈ ತೀರ್ಪಿನಿಂದಾಗಿ ಅತೃಪ್ತ ಶಾಸಕರು ಹಾಜರಾಗುವುದು ಬಿಡುವುದು ಅವರ ವಿವೇಚನೆಗೆ ಬಿಟ್ಟ ವಿಚಾರ. ಅದರಲ್ಲಿ ನಾನು ಭಾಗಿಯಾಗಲು ಸಾಧ್ಯವಿಲ್ಲ. ಜತೆಗೆ ವಿಪ್​ಗೆ ನಾನು ಯಾವುದೇ ರೀತಿಯ ಮಾಹಿತಿ ನೀಡುವುದಿಲ್ಲ ಎಂದು ಇದೇ ವೇಳೆ ತಿಳಿಸಿದರು. ಆದರೆ ಸುಪ್ರೀಂಕೋರ್ಟ್​ ತೆಗೆದುಕೊಂಡ ನಿರ್ಧಾರ ಸರಿಯಾಗಿದ್ದು, ಅದರಲ್ಲಿ ನಾವು ಗೆಲುವು ದಾಖಲು ಮಾಡಿದ್ದೇವೆ ಎಂದಿದ್ದಾರೆ. ನಾಳೆ ವಿಶ್ವಾಸಮತಯಾಚನೆ ನಡೆಯಬಹುದು. ಅದು ಮುಂದೂಡಲುಬಹುದು. ಅದು ಸ್ಪೀಕರ್​ ನಿರ್ಧಾರ ಹಾಗೂ ವಿವೇಚನೆಗೆ ಬಿಟ್ಟ ವಿಚಾರ ಎಂದಿರುವ ಅಭಿಷೇಕ್​ ಮನು ಸಿಂಘ್ವಿ, ಅತೃಪ್ತ ಶಾಸಕರು ಸದನಕ್ಕೆ ಬರುವಂತೆ ಒತ್ತಡ ಹಾಕುವಂತಿಲ್ಲ ಎಂದು ತ್ರಿ ಸದಸ್ಯ ಪೀಠ ಹೇಳಿದೆ. ಹೀಗಾಗಿ ಎಲ್ಲರೂ ಸಂವಿಧಾನದ ಆಶಯಗಳನ್ನ ಕಾಪಾಡಬೇಕು ಎಂದು ಅವರು ತಿಳಿಸಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا