Urdu   /   English   /   Nawayathi

ಯಲ್ಲಾಪುರದ ಬಾಳಗಾರಿನ ಬೆಟ್ಟದಲ್ಲಿ ಇಂಗು ಗುಂಡಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರ ಸಾವು: ತಡರಾತ್ರಿ ಶವಗಳು ಪತ್ತೆ

share with us

ಕಾರವಾರ: 14 ಜುಲೈ 2019 (ಫಿಕ್ರೋಖಬರ್ ಸುದ್ದಿ) ಯಲ್ಲಾಪುರದ ಬಾಳಗಾರಿನಲ್ಲಿ ಶನಿವಾರ ಬೆಟ್ಟಕ್ಕೆ ಆಟವಾಡಲು ತೆರಳಿದ್ದ ಬಾಲಕಿಯರಿಬ್ಬರು ಇಂಗು ಗುಂಡಿಗೆ ಬಿದ್ದು ಮೃತಪಟ್ಟಿದ್ದಾರೆ. ಸಹನಾ ಕೃಷ್ಣ ಭಟ್ (10), ರಶ್ಮಿ ಪಟಗಾರ (7) ಮೃತ ಬಾಲಕಿಯರು. ಶನಿವಾರ ಶಾಲೆ ಬಿಟ್ಟ ನಂತರ ಆಡವಾಡಲು ಮನೆಯ ಸಮೀಪದ ಬೆಟ್ಟಕ್ಕೆ ಇಬ್ಬರೂ ತೆರಳಿದ್ದರು. ಎಷ್ಟು ಹೊತ್ತಾದರೂ ಇವರಿಬ್ಬರೂ ಮರಳಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸ್ನೇಹಿತರು ಮತ್ತು ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದ ಬಳಿಕ ಬೆಟ್ಟದಲ್ಲಿ ಹುಡುಕಾಟ ನಡೆಸಲಾಯಿತು. ತಡರಾತ್ರಿ ವೇಳೆಗೆ ಇವರಿಬ್ಬರ ಶವಗಳು ಇಂಗುಗುಂಡಿಯಲ್ಲಿ ಪತ್ತೆಯಾದವು ಎಂದು ಹೇಳಿದ್ದಾರೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರತಿ ಶನಿವಾರ, ಭಾನುವಾರವೂ ಸೊಪ್ಪಿನ ಬೆಟ್ಟಕ್ಕೆ ಆಟವಾಡಲು ಮಕ್ಕಳು ಹೋಗುತ್ತಿದ್ದರು ಎಂದು ಪೊಷಕರು ತಿಳಿಸಿದ್ದಾರೆ. ಸೊಪ್ಪಿನ ಬೆಟ್ಟದಲ್ಲಿ ನೀರಿಂಗಿಸಲು ಇಂಗು ಗುಂಡಿಗಳನ್ನು ತೊಡಿದ್ದು ಆಕಸ್ಮಿಕವಾಗಿ ಇಬ್ಬರೂ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂದು ಹೇಳಲಾಗಿದೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا