Urdu   /   English   /   Nawayathi

ಸರ್ಕಾರ ಈಗ ಸುಭದ್ರ, ಆದ್ರೆ ಐದು ವರ್ಷ ಹೀಗೇ ಇರುತ್ತೆ ಅಂತಾ ಹೇಳಕ್ಕಾಗಲ್ಲ: ಸಚಿವ ಜಿಟಿಡಿ

share with us

ಮೈಸೂರು: 13 ಜುಲೈ 2019 (ಫಿಕ್ರೋಖಬರ್ ಸುದ್ದಿ) ಸಮ್ಮಿಶ್ರ ಸರ್ಕಾರ ಈಗ ಸುಭದ್ರವಾಗಿದೆ. ಆದ್ರೆ ಐದು ವರ್ಷ ಹೀಗೇ ಇರುತ್ತೆ ಅಂತಾ ಹೇಳಕ್ಕಾಗಲ್ಲವೆಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ. ಮೈಸೂರಿನಲ್ಲಿ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಪರೇಷನ್​, ರಿವರ್ಸ್​ ಆಪರೇಷನ್​ ಬಗ್ಗೆ ಎಲ್ಲರಿಗೂ ಭಯ, ಆತಂಕವಿದೆ. ಆದರೆ ಸದ್ಯ ನಮಗೆ ಭಯವಿಲ್ಲ‌. ಮುಂಬೈಗೆ ಮತ್ತೆ ನಾನು ಹೋಗುವುದಿಲ್ಲ. ಎಲ್ಲವೂ ಇಲ್ಲೇ ಆಗುತ್ತದೆ ಎಂದರು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸ ಮಂಡನೆ ಮಾಡ್ತೀನಿ ಎಂದಿದ್ದಾರೆ. ಅತೃಪ್ತ ಶಾಸಕರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا