Urdu   /   English   /   Nawayathi

ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಅಧಿಕಾರಿ

share with us

ಮೈಸೂರು: 11 ಜುಲೈ 2019 (ಫಿಕ್ರೋಖಬರ್ ಸುದ್ದಿ) ಬಾಕಿ ಹಣದ ಚೆಕ್ ನೀಡಲು ಲಂಚ ಪಡೆಯುತ್ತಿದ್ದ ಕೆ.ಎಸ್.ಆರ್.ಟಿ.ಸಿ ಡಿಪೋದ ಅಕೌಂಟೆಂಟ್ ಸೂಪರ್​ವೈಸರ್​ ಎಸಿಬಿ ಬಲೆಗೆ ಬಿದ್ದಿದ್ದಾನೆ. ಚಾಲಕರೊಬ್ಬರಿಗೆ ಬಾಕಿ ಹಣದ ಚೆಕ್ ನೀಡಲು ಲಂಚ ಪಡೆಯುತ್ತಿದ್ದ ಕೆ.ಎಸ್.ಆರ್.ಟಿ.ಸಿ.‌ ಗ್ರಾಮಾಂತರ ವಿಭಾಗದ ಡಿಪೋ ಅಕೌಂಟೆಂಟ್ ಸೂಪರ್​ವೈಸರ್​​ ಮಂಜುನಾಥ್ ಎಸಿಬಿ ಬಲೆಗೆ ಬಿದ್ದಿದ್ದಾನೆ. ಬಸ್ ಡ್ರೈವರ್ ಬಸವರಾಜು ಎಂಬುವವರಿಗೆ 1 ಲಕ್ಷ ಬಾಕಿ ಹಣದ ಚೆಕ್ ನೀಡಬೇಕಾಗಿತ್ತು. ಇದಕ್ಕಾಗಿ 10,000 ಲಂಚಕ್ಕಾಗಿ ಪೀಡಿಸುತ್ತಿದ್ದನಂತೆ. ಈ ಸಂಬಂಧ ಡ್ರೈವರ್ ಎಸಿಬಿಗೆ ದೂರು ನೀಡಿದ್ದರು. ಸದ್ಯ ಹಣ ಸ್ವಿಕರಿಸುತ್ತಿದ್ದಾಗ ಮಂಜುನಾಥ್ ಎಸಿಬಿ ಬಲೆಗೆ ಬಿದ್ದಿದ್ದು, ಈ ಸಂಬಂಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅನ್ವಯ ಆರೋಪಿಯನ್ನು ಬಂಧಿಸಿರುವ ಎಸಿಬಿ ಪೊಲೀಸರು, ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا