Urdu   /   English   /   Nawayathi

ಅವಕಾಶ ಸಿಕ್ಕರೆ ಅಧಿಕಾರ ನಡೆಸಲು ಸಿದ್ಧ: ಕೇಂದ್ರ ಸಚಿವ ಸದಾನಂದಗೌಡ

share with us

ನವದೆಹಲಿ: 09 ಜುಲೈ 2019 (ಫಿಕ್ರೋಖಬರ್ ಸುದ್ದಿ) ರಾಜ್ಯದಲ್ಲಿನ ಅತಂತ್ರ ರಾಜಕಾರಣದ ಬಗ್ಗೆ ನವದೆಹಲಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಅವಕಾಶ ಸಿಕ್ಕರೆ ಅಧಿಕಾರ ನಡೆಸಲು ಸಿದ್ಧ ಎಂದಿದ್ದಾರೆ. ಸಂಸತ್ ಕಲಾಪದ ಬಿಡುವಿನ ವೇಳೆ ಮಾತನಾಡಿದ ಅವರು, ಸದ್ಯ ಮೈತ್ರಿ ಸರ್ಕಾರದ ಬಲಾಬಲ 102 ಇದೆ. ನಾವು 107 ಶಾಸಕರ ಬಹುಮತ ಹೊಂದಿದ್ದೇವೆ. ಅವಕಾಶ ಸಿಕ್ಕರೆ ಅಧಿಕಾರ ನಡೆಸಲು ಸಿದ್ದರಿದ್ದೇವೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಅಧಿಕಾರಕ್ಕೆ ಈ ಮೊದಲು ನಾವು ಪ್ರಯತ್ನಿಸಿದ್ದೆವು. ಆನಂತರ ಸುಮ್ಮನಾದೆವು. ಇದೀಗ ಅಷ್ಟೂ ಮಂದಿ ಶಾಸಕರು ಅವರ ನಾಯಕರು ಹಾಗೂ ಸರ್ಕಾರದ ಬಗ್ಗೆಯೇ ನಂಬಿಕೆ ಇಲ್ಲವಾಗಿದೆ. ಇದಕ್ಕೆ ನಾವೇನು ಮಾಡೋಕಾಗುತ್ತೆ? ಇದೆಲ್ಲ ಅವರ ನಿರ್ಧಾರ. ನಾವು ಯಾವ ಶಾಸಕರ ಹಿಂದೆಯೂ ಇಲ್ಲ. ಈ ಬಗ್ಗೆ ಈಗಾಗಲೇ ಸಂಸತ್ತಿನಲ್ಲಿ ರಾಜನಾಥ್​ಸಿಂಗ್ ಅವರು ಸರಿಯಾದ ಉತ್ತರ ಕೊಟ್ಟಿದ್ದಾರೆ ಎಂದರು. ರೆಸ್ಟೋರೆಂಟ್​ ಅಥವಾ ಏರ್​ಪೋರ್ಟ್​ಗಳು ಸಾರ್ವಜನಿಕ ಸ್ಥಳಗಳು. ಯಾರು ಬೇಕಾದರೂ ಅಲ್ಲಿಗೆ ಹೋಗಬಹುದು. ಬಿಜೆಪಿ ನಾಯಕರು ಅಲ್ಲಿ-ಇಲ್ಲಿ ಕಾಣಿಸಿಕೊಂಡರು ಎಂದು ಹೇಳುವುದು ಸರಿಯಲ್ಲ ಎಂದೂ ಹೇಳಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا