Urdu   /   English   /   Nawayathi

ತುಮಕೂರಿನಲ್ಲಿ ಯಮರೂಪಿಯಾಗಿ ಬಂದ ಬಸ್​: ಅಪಘಾತದಲ್ಲಿ ನಾಲ್ವರ ದುರ್ಮರಣ

share with us

ತುಮಕೂರು: 04 ಜುಲೈ 2019 (ಫಿಕ್ರೋಖಬರ್ ಸುದ್ದಿ) ನಗರದ ಹೊರವಲಯದ ಮಲ್ಲಸಂದ್ರ ಬಳಿ ಕೆಎಸ್ಆರ್​​ಟಿಸಿ ಬಸ್ ಮತ್ತು ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ. ಮಲ್ಲಸಂದ್ರ ಡೈರಿ ಬಳಿ ಈ ಘಟನೆ ನಡೆದಿದ್ದು, ಸಾವನ್ನಪ್ಪಿರುವವರನ್ನು ಆಟೋದಲ್ಲಿದ್ದ ಹರೀಶ್ ( ಆಟೋಚಾಲಕ) (37) ವೃದ್ದ ದಂಪತಿ ಬಸವರಾಜು(67) ಮತ್ತು ಗಂಗಾಂಬಿಕಾ (61) ಎಂದು ಗುರುತಿಸಲಾಗಿದೆ. ಇನ್ನೊಬ್ಬರೂ ಕೂಡ ಸಾವನ್ನಪ್ಪಿದ್ದು ಅವರು ಯಾರೆಂದು ತಿಳಿದು ಬಂದಿಲ್ಲ. ಅಪಘಾತಕ್ಕೀಡಾಗಿರುವ ಬಸ್ ಬೆಂಗಳೂರಿನಂದ ಶಿವಮೊಗ್ಗ ಕಡೆ ತೆರಳುತ್ತಿತ್ತು ಹಾಗೂ ಆಟೋ ಗುಬ್ಬಿಯಿಂದ ತುಮಕೂರು ಕಡೆಗೆ ತೆರಳುತ್ತಿತ್ತು. ಸುದ್ದಿ ತಿಳಿಯುತ್ತಿದ್ದಂತೆ ತುಮಕೂರು ಗ್ರಾಮಾಂತರ ಪೋಲಿಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವಗಳನ್ನು ಶವಾಗಾರಕ್ಕೆ ಸಾಗಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا