Urdu   /   English   /   Nawayathi

ಚಾಮರಾಜನಗರ: ಅಪಘಾತದಲ್ಲಿ ಪೋಷಕರ ಸಾವು, ಅದೃಷ್ಠವಶಾತ್ ಬದುಕುಳಿದ ಬಾಲಕನ ಆಕ್ರಂದನ!

share with us

ಚಾಮರಾಜನಗರ: 20 ಜೂನ್ 2019 (ಫಿಕ್ರೋಖಬರ್ ಸುದ್ದಿ) ಟೆಂಪೋ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಹೆತ್ತವರು ಮೃತಪಟ್ಟಿದ್ದು ಅದೃಷ್ಠವಶಾತ್ ಬದುಕುಳಿದ ಮಗು ಮೃತ ತಂದೆ ಮುಂದೆ ಕುಳಿತು ಎದ್ದೇಳು ಅಪ್ಪಾ ಎಂದು ಕೂಗುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ. ನಂಜನಗೂಡಿನಲ್ಲಿ ಸಂಬಂಧಿಕರ ಮದುವೆಗೆಂದು ಚಾಮರಾಜನಗರ ತಾಲೂಕಿನ ಕಾಗಲವಾಡಿ ಗ್ರಾಮದ ಮಾದೇಶ್ ಮತ್ತು ಮಣಿ ತಮ್ಮ ಪುತ್ರನೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಚಾಮರಾಜನಗರದ ಬಳಿ ಟೆಂಪೋ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಸ್ಥಳದಲ್ಲೇ ಮಾದೇಶ್ ಮತ್ತು ಮಣಿ ಮೃತಪಟ್ಟಿದ್ದು ಬದುಕುಳಿದಿರುವ ಬಾಲಕ ಹೆತ್ತವರ ಮುಂದೆ ಕುಳಿತು ಎದ್ದೇಳು ಅಪ್ಪಾ ಎಂದು ಎಬ್ಬಿಸಲು ಪ್ರಯತ್ನಿಸುತ್ತಿರುವ ದೃಶ್ಯ ನೆರೆದಿದ್ದ ಜನರ ಕಣ್ಣಗಳು ಒದ್ದೆಯಾಗುವಂತೆ ಮಾಡಿತು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا