Urdu   /   English   /   Nawayathi

ಬಿಎಸ್​ಎನ್​ಎಲ್​ ಟವರ್​ ಕೆಳಗೆ ತರಕಾರಿ ಗಿಡ ನೆಟ್ಟ ಜನ... ಯಾಕೆ ಗೊತ್ತಾ..!

share with us

ಮಂಗಳೂರು: 19 ಜೂನ್ 2019 (ಫಿಕ್ರೋಖಬರ್ ಸುದ್ದಿ) ಕಳೆದ ಎಂಟು ತಿಂಗಳಿಂದ ಬಿಎಸ್​ಎನ್​ಎಲ್​ ನೆಟ್ವರ್ಕ್ ಸರಿಯಾಗಿ ಕಾರ್ಯನಿರ್ವಹಿಸದೆ ಇರುವುದರಿಂದ ಆಕ್ರೋಶಗೊಂಡ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹರಿಹರ ಪಳ್ಳತಡ್ಕದ ಗ್ರಾಮಸ್ಥರು ಟವರ್ ಬುಡದಲ್ಲಿ ತರಕಾರಿ ನೆಟ್ಟು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಹರಿಹರ ಪಳ್ಳತಡ್ಕ ತೀರಾ ಗ್ರಾಮಾಂತರ ಪ್ರದೇಶವಾಗಿರುವುದರಿಂದ ಜನ ಬಿಎಸ್​ಎನ್​ಎಲ್​ ನೆಟ್​ವರ್ಕ್​ ಅನ್ನೇ ನಂಬಿದ್ದು, ಅದು ಕೂಡ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಟವರ್ ನ ಬುಡಕ್ಕೆ ಬಳ್ಳಿ ತರಹದ ಸೊಪ್ಪು, ತರಕಾರಿಗಳನ್ನು ನೆಡುವ ಮೂಲಕ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದರು. ಬಿಎಸ್ಎನ್ಎಲ್ ಅಧಿಕಾರಿಗಳು ಸಮಸ್ಯೆ ಸರಿಪಡಿಸಲು ವಿಳಂಬ ಮಾಡಿದ್ದಲ್ಲಿ ಅನುಪಯುಕ್ತ ಟವರನ್ನು ಗ್ರಾಮಸ್ಥರೇ ಸೇರಿ ತೆರವುಗೊಳಿಸುವ ಎಚ್ಚರಿಕೆ ನೀಡಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا