Urdu   /   English   /   Nawayathi

ಮಾನ್ಸೂನ್ ಆರಂಭದಲ್ಲೇ ಆರ್ಭಟ ತೋರಿಸುತ್ತಿದೆ ಕಡಲು, ಕೊಚ್ಚಿ ಹೋಗುತ್ತಿವೆ ಕಲ್ಲುಗಳು

share with us

ಭಟ್ಕಳ: 17 ಜೂನ್ 2019 (ಫಿಕ್ರೋಖಬರ್ ಸುದ್ದಿ) ಮಾನ್ಸೂನ್ ಆರಂಭದಲ್ಲೇ ತಾಲೂಕಿನ ಬಂದರಿನ ತಲಗೋಡು ವ್ಯಾಪ್ತಿಯ ಸಮುದ್ರದ ದಂಡೆಯ ಕಲ್ಲುಗಳು ಸಮುದ್ರದ ನೀರಿಗೆ ಕೊಚ್ಚಿ ಹೋಗಲು ಆರಂಭಿಸಿವೆ. ಮುಂದಿನ ದಿನಗಳಲ್ಲಿ ಇದು ಯಾವ ಮಟ್ಟ ತಲುಪಲಿದೆಯೋ ಎಂಬ ಆತಂಕ ಸ್ಥಳೀಯರನ್ನು ಕಾಡಲಾರಂಬಿಸಿದೆ. ತಾಲೂಕಿನ ಮಾವಿನಕುರ್ವೆ ಪಂಚಾಯಿತಿ ವ್ಯಾಪ್ತಿಯ ಬಂದರಿನ ಸಮುದ್ರದ ದಂಡೆಯಲ್ಲಿ ಮೊದಲ ಮಳೆಗೇ ಕಡಲು ತನ್ನ ಆರ್ಭಟ ತೋರಿಸಲು ಆರಂಭಿಸಿದೆ. ಈಗಾಗಲೇ ಕಡಲು ಕೊರೆತವಾಗದಂತೆ ಹಾಕಿದ ಕಲ್ಲುಗಳು ನೀರಿನಲ್ಲಿ ಕೊಚ್ಚಿ ಹೋಗಲು ಆರಂಭಿಸಿವೆ. ಇನ್ನು ಚಂಡಮಾರುತವೇನಾದರೂ ಕರಾವಳಿಗೆ ಅಪ್ಪಳಿಸಿದರೆ ಪರಿಸ್ಥಿತಿ ಗಂಭೀರ ರೂಪ ಪಡೆದುಕೊಳ್ಳುತ್ತದೆ ಎಂಬ ಆತಂಕ ಸ್ಥಳೀಯರಲ್ಲಿ ಮೂಡಿದೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا