Urdu   /   English   /   Nawayathi

ಮ್ಯಾಜಿಕ್​ ಮಾಡಲು ಹೋಗಿ ಟ್ರಾಜಿಡಿ​ ಆಯ್ತು... ಗಂಗಾ ಪಾಲಾದ್ರಾ ಜಾದೂಗಾರ!?

share with us

ಕೋಲ್ಕತ್ತಾ: 17 ಜೂನ್ 2019 (ಫಿಕ್ರೋಖಬರ್ ಸುದ್ದಿ) ಕಬ್ಬಿಣದ ಸರಪಳಿಗಳಿಂದ ತನ್ನನ್ನು ತಾನು ಬಂಧಿಸಿಕೊಂಡು ನದಿಯೊಳಗೆ ಧುಮುಕಿ ಸುರಕ್ಷಿತವಾಗಿ ಮೇಲೆ ಬರುವ ಜಾದು ಮಾಡಲು ಹೋಗಿ ಜಾದೂಗಾರನೇ ಕಾಣಿಸದಂತೆ ಮಾಯವಾಗಿರುವ ಘಟನೆ ಕೋಲ್ಕತ್ತಾದ ಹೌರಾ ಬ್ರಿಡ್ಜ್​ ಬಳಿ ನಡೆದಿದೆ.ಪ್ರಸಿದ್ಧ ಜಾದೂಗಾರ ಚಂಚಲ್​ ಲಾಹಿರಿ (40) ಹೌರಾ ಬ್ರಿಡ್ಜ್​ ಬಳಿ ಜಾದೂ ತೋರಿಸಲು ಬಂದಿದ್ದರು. ಭಾನುವಾರ ಹೌರಾ ಬ್ರಿಡ್ಜ್​ ಬಳಿ ಪೊಲೀಸರು, ಮಾಧ್ಯಮ, ಕುಟುಂಬಸ್ಥರು ನೋಡುತ್ತಿದ್ದಂತೆ ಮ್ಯಾಜಿಕ್​ ಮಾಡಲು ನದಿಯೊಳಗೆ ಧುಮಕಿದರು. ಆದ್ರೆ, ಅವರು ಮೇಲೇಳಲೇ ಇಲ್ಲ. ಬಳಿಕ ಪೊಲೀಸರು ರಕ್ಷಣಾ ಕಾರ್ಯಾಚರಣೆ ಕೈಗೊಂಡರೂ ಯಾವುದೇ ಉಪಯೋಗವಾಗಲಿಲ್ಲ. ಪೊಲೀಸರು ಆತನಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಜಾದೂಗಾರ ಚಂಚಲ್​ 6 ವರ್ಷಗಳ ಹಿಂದೆ ಇದೇ ಟ್ರಿಕ್​ ಬಳಿಸಿ ಯಶಸ್ಸು ಕಂಡಿದ್ದರು. ಆದ್ರೆ, ಈ ಬಾರಿ ಮ್ಯಾಜಿಕ್​ ಮಾಡಲು ಹೋಗಿ ಟ್ರಾಜಿಕ್​ ಆಗಿದೆ. ‘ಬುಲೆಟ್​ಪ್ರೂಫ್​ ಗ್ಲಾಸ್​ ಬಾಕ್ಸ್​ನಲ್ಲಿ ಕುಳಿತು ಕಬ್ಬಿಣದ ಸರಪಳಿಯಿಂದ ಬಂಧಿಸಿಕೊಂಡಿದ್ದೇನೆ. ಬೀಗ ಹಾಕಿದ್ದಾರೆ. 29 ಸೆಕೆಂಡ್​ ಒಳಗೆ ವಾಪಾಸ್​ ಬರುತ್ತೇನೆ. ಆದ್ರೆ ಈ ಬಾರಿ ಸ್ವಲ್ಪ ಕಷ್ಟವೆನಿಸುತ್ತಿದೆ. ಒಂದು ವೇಳೆ ಹೊರಗೆ ಬಂದ್ರೆ ಅದು ಮ್ಯಾಜಿಕ್​ ಆಗುತ್ತೆ. ಇಲ್ಲವಾದಲ್ಲಿ ಟ್ರಾಜಿಡಿ​ ಆಗುತ್ತೆ’ ಎಂದು ಜಾದೂಗಾರ ಚಂಚಲ್​ ಗಂಗೆಯೊಳಗೆ ಇಳಿಯುವ ಮುನ್ನ ಹೇಳಿದ್ದರು. ಜಾದೂಗಾರ ಊಹಿಸಿದಂತೆ ಮ್ಯಾಜಿಕ್​ ಸ್ವಲ್ಪ ಟ್ರಾಜಿಡಿ​ ಆಗಿರುವುದು ವಿಷಾದಕರವಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا