Urdu   /   English   /   Nawayathi

ಈ ಕಾರಣಕ್ಕಾಗಿ ಬಿತ್ತು ಎರಡು ಹೆಣ​... ಬೀದರ್​ ವ್ಯಕ್ತಿಯಿಂದ ಹೈದರಾಬಾದ್​ ದಂಪತಿ ಬರ್ಬರ ಕೊಲೆ!

share with us

ಹೈದರಾಬಾದ್​: 17 ಜೂನ್ 2019 (ಫಿಕ್ರೋಖಬರ್ ಸುದ್ದಿ) ಡೈವರ್​ವೊಬ್ಬ ತನ್ನ ಮಾಲೀಕನ ಮೇಲೆ ಮನಸ್ತಾಪಗೊಂಡಿದ್ದಾನೆ. ಕುಪಿತಗೊಂಡ ಚಾಲಕ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಹೈದರಾಬಾದ್​ ನಿವಾಸಿ ನವರತನ್​ ರೆಡ್ಡಿ (76), ಸ್ನೇಹಲತಾ (72) ದಂಪತಿಗೆ ಕರ್ನಾಟಕದ ಬೀದರ್​ ಜಿಲ್ಲೆಯ ಹುಮ್ನಾಬಾದ್​ನಲ್ಲಿ ವ್ಯವಸಾಯದ ಭೂಮಿಗಳಿವೆ. ಇವರ ಕಾರಿಗೆ ಹುಮ್ನಾಬಾದ್​ ನಿವಾಸಿ ಸತೀಶ್​ ಚಾಲಕನಾಗಿ ಕೆಲಸಕ್ಕಿದ್ದ. ಈ ತಿಂಗಳು 12 ರಂದು ಹುಮ್ನಾಬಾದ್​ನ ಹೊಲಗಳಿಗೆ ನವರತನ್​ ರೆಡ್ಡಿ ದಂಪತಿ ಭೇಟಿ ನೀಡಿದ್ದರು. ನವರತನ್ ರೆಡ್ಡಿ​ ಹೊಲಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸತೀಶ್​ ಒಂದು ಲಕ್ಷ ರೂ. ಸಾಲವಾಗಿ ಕೊಡುವಂತೆ ಕೇಳಿದ್ದಾನೆ. ಇದಕ್ಕೆ ನವರತನ್​ ರೆಡ್ಡಿ ನಿರಾಕರಿಸಿದ್ದಾರೆ. ಇದರಿಂದ ಮನಸ್ತಾಪಗೊಂಡ ಸತೀಶ್​ ತನ್ನ ಸ್ನೇಹಿತ ರಾಹುಲ್​ ಜೊತೆಗೂಡಿ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಇಬ್ಬರ ಮೃತದೇಹಗಳನ್ನು ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ವಿಕರಾಬಾದ್​ ಜಿಲ್ಲೆಯ ಅನಂತಗಿರಿ ಕಾಡಿನೊಳಗೆ ಎಸೆದು, ಏನೂ ಅರಿಯದವನಂತೆ ಕಾರನ್ನು ಮಾಲೀಕನ ಮನೆಯಲ್ಲಿ ಬಿಟ್ಟು ಹೋಗಿದ್ದಾನೆ. ಇನ್ನು ವೃದ್ಧ ದಂಪತಿ ಕಾಣುತ್ತಿಲ್ಲ ಎಂದು ಸಂಬಂಧಿಕರು ಈ ತಿಂಗಳು 14 ರಂದು ಹುಮ್ನಾಬಾದ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಡ್ರೈವರ್​ ಸತೀಶ್​ ಮೇಲೆ ಅನುಮಾನಗೊಂಡಿದ್ದಾರೆ. ಸತೀಶ್​ನನ್ನು ವಿಚಾರಣೆಗೊಳಪಡಿಸಿದಾಗ ದಂಪತಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಪೊಲೀಸರು ಆರೋಪಿ ಸತೀಶ್​ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا