Urdu   /   English   /   Nawayathi

ರಸ್ತೆ ಬದಿ ಅಕ್ರಮವಾಗಿ ನಿರ್ಮಿಸಿದ್ದ 20ಕ್ಕೂ ಹೆಚ್ಚು ಮಳಿಗೆಗಳ ತೆರವು

share with us

ಚಿಕ್ಕಬಳ್ಳಾಪುರ: 04 ಜೂನ್ 2019 (ಫಿಕ್ರೋಖಬರ್ ಸುದ್ದಿ) ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹೊಸರು ಹೋಬಳಿಯ ಕೋಟಾಲದಿಣ್ಣೆ ಬಳಿ ರಸ್ತೆ ಬದಿ ಅಕ್ರಮವಾಗಿ ನಿರ್ಮಿಸಿದ್ದ ಮಳಿಗೆಗಳನ್ನು ತೆರವುಗೊಳಿಸಲಾಯಿತು. ಸುಮಾರು 20 ಕ್ಕೂ ಹೆಚ್ಚು ಮಳೆಗೆಗಳಿಂದ ಗೌರಿಬಿದನೂರು-ಮಧುಗಿರಿ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಿದ ಕಾರಣ ಸವಾರರಿಗೆ ಕಿರಿಕಿರಿ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಅಂತೆಯೇ ತಾಲೂಕಾಡಳಿತ ಇಂದು ಕಾರ್ಯಾಚರಣೆ ನಡೆಸಿ ಜೆಸಿಬಿ ಮೂಲಕ ಮಳಿಗೆಗಳನ್ನು ತೆರವುಗೊಳಿಸಿದರು.

evacuation

20ಕ್ಕೂ ಹೆಚ್ಚು ಮಳಿಗೆಗಳ ತೆರವು

ತಹಶೀಲ್ದಾರ್ ಶ್ರೀನಿವಾಸ್ ಮೂರ್ತಿ ನೇತೃತ್ವದಲ್ಲಿ ಸೋಮವಾರ ಸಂಜೆ ಸರ್ವೇ ಮಾಡಿ, ಇಂದು ಮಳಿಗೆಗಳ ತೆರವು ಕಾರ್ಯಚರಣೆ ನಡಸಲಾಯಿತು.

evacuation

20ಕ್ಕೂ ಹೆಚ್ಚು ಮಳಿಗೆಗಳ ತೆರವು

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا