Urdu   /   English   /   Nawayathi

ಗುಟ್ಕಾ ಡೆಲಿವರಿ ಮಾಡುತ್ತಿದ್ದವನಿಗೆ ಚಾಕು ಇರಿದು 25 ಲಕ್ಷ ಹಣ ದೋಚಿದ ಖದೀಮರು!

share with us

ಚಿತ್ರದುರ್ಗ: 04 ಜೂನ್ 2019 (ಫಿಕ್ರೋಖಬರ್ ಸುದ್ದಿ) ಗುಡ್ಕಾ ಡೆಲಿವರಿ ಮಾಡುತ್ತಿದ್ದವನಿಗೆ ಚಾಕುವಿನಿಂದ ಇರಿದು 25 ಲಕ್ಷ ಹಣ ದೋಚಿ ಖದೀಮರು ಪರಾರಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದ ಲೈಬ್ರರಿ ಹಿಂಭಾಗದ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ವಲಿಸಾಬ್ ಎಂಬುವರಿಗೆ ಚಾಕುವಿನಿಂದ ಇರಿದು ಹಣ ದೋಚಿ ಬೈಕ್​ನಲ್ಲಿ ದರೋಡೆಕೋರರು ಪರಾರಿಯಾಗಿದ್ದಾರೆ. ಹಿರಿಯೂರು ಸೇರಿದಂತೆ ಬೇರೆ ತಾಲೂಕು ಕೇಂದ್ರಗಳಿಗೆ ಗುಟ್ಕಾ ಡೆಲಿವರಿ ಮಾಡುತ್ತಿದ್ದ ವಾಲಿಸಾಬ್​ನನ್ನು ಗುರಿಯಾಗಿಸಿಕೊಂಡ ಖದೀಮರು ತಡರಾತ್ರಿ 25 ಲಕ್ಷ ದೋಚಿ ಪಲ್ಸರ್ ಬೈಕ್​​ನಲ್ಲಿ ಎಸ್ಕೇಪ್ ಆದ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಗುಟ್ಕಾ ವ್ಯಾಪಾರಿ ವಾಲಿಸಾಬ್​ಗೆ ತೀವ್ರ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಕಳೆದ ದಿನ ವಲಿಸಾಬ್ ಹೊಸದುರ್ಗದಿಂದ ಆಗಮಿಸಿ ಹಿರಿಯೂರು ಕೆಎಸ್ಆರ್​ಟಿಸಿ ಬಸ್ ನಿಲ್ದಾಣದಿಂದ ಆಟೋ ಹತ್ತಿದ ಕ್ಷಣದಿಂದ ಹಿಂಬಾಲಿಸಿದ ಮೂರು ಜನ ಖದೀಮರು, ಮನೆಯ ಬಳಿ‌ ಆಟೋ ಇಳಿಯುವ ವೇಳೆ ಚಾಕುವಿನಿಂದ ಇರಿದು ಹಣ ಲಪಟಾಯಿಸಿದ್ದಾರೆ. ಈ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಹಿರಿಯೂರು ನಗರ ಪಿಎಸ್ಐ ಮಂಜುನಾಥ್ ಮತ್ತು ಪೊಲೀಸರು ಪರಿಶೀಲನೆ ನಡೆಸಿ ಪ್ರಕಣ ದಾಖಲಿಸಿಕೊಂಡು ಆರೋಪಿಗಳಿಗೆ ಬಲೆ ಬೀಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا