Urdu   /   English   /   Nawayathi

ಸಾವೇ ನೀನೆಷ್ಟು ಕ್ರೂರಿ? ಫೋಟೋಗಾಗಿ ನದಿಗಿಳಿದವರು ಮತ್ತೆ ಮೇಲೇಳಲಿಲ್ಲ! ವಿಡಿಯೋ

share with us

ಹೈದರಾಬಾದ್​: 02 ಜೂನ್ 2019 (ಫಿಕ್ರೋಖಬರ್ ಸುದ್ದಿ) ಮೋಜು-ಮಸ್ತಿಗಾಗಿ ಜನರು ಅಪಾಯವನ್ನೇ ಮೈಮೇಲೆಳೆದುಕೊಂಡ ಹಲವು ನಿದರ್ಶನಗಳಿವೆ. ತೆಲಂಗಾಣದಲ್ಲಿ ಮೋಜಿಗಾಗಿ ನದಿಗಳಿದ ಮೂವರು ನೋಡನೋಡುತ್ತಿದ್ದಂತೆಯೇ ಜಲಸಮಾಧಿಯಾದ ಮನಕಲಕುವ ಘಟನೆ ನಡೆದಿದೆ. ಜನಗಾಮ ಜಿಲ್ಲೆಯ ನರ್ಮೆಟ್ಟ ಮಂಡಲ್​ನಲ್ಲಿರುವ ಮೊಮ್ಮಕೂರು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ. ನದಿಯಲ್ಲಿ ಮಸ್ತಿ ಮಾಡುತ್ತಿದ್ದಾಗ ಮೂವರು ಮುಳುಗಿದ ವಿಡಿಯೋ ಲಭ್ಯವಾಗಿದೆ. ಕಣ್ಣೆದುರೇ ಪತಿ ಹಾಗೂ ಇಬ್ಬರು ಸಹೋದರಿಯರನ್ನು ಕಳೆದುಕೊಂಡ ಮಹಿಳೆಯ ಆಕ್ರಂದನ ಮುಗಿಲುಮುಟ್ಟಿತ್ತು.

ಘಟನೆ: ಮೇಕಲಗಟ್ಟು ಪ್ರದೇಶದ ಅವಿನಾಶ್​ ಎಂಬುವರು ತಮ್ಮ ಪತ್ನಿ ದಿವ್ಯ ಹಾಗೂ ಆಕೆಯ ಇಬ್ಬರು ಸಹೋದರಿಯರ ಜತೆ ಬೊಮ್ಮಕೂರು ಡ್ಯಾಂಗೆ ಪಿಕ್​ನಿಕ್​ಗೆಂದು​ ಬಂದಿದ್ದರು. ಬೆಳಗ್ಗೆಯಿಂದಲೂ ನದಿಯ ತಟದಲ್ಲಿ ಸಖತ್​ ಮಸ್ತಿ ಮಾಡಿದ್ದಾರೆ. ಆನಂತರ ದಿವ್ಯ ಅಪೇಕ್ಷೆಯಂತೆ ಅವಿನಾಶ್​, ಆಕೆಯ ಸಹೋದರಿಯರಿಬ್ಬರು ನದಿಗಿಳಿದು ಕ್ಯಾಮರಾಕ್ಕೆ ಪೋಸ್​ ನೀಡುತ್ತಿದ್ದರು. ಅದೇ ಅವರ ಕಡೆಯ ವಿಡಿಯೋ ಎಂದು ವಿಧಿಗೆ ಮಾತ್ರ ಗೊತ್ತಿತ್ತು. ನಿಂತಿದಲ್ಲಿಯೇ ಉರುಳಿಬಿದ್ದ ಮೂವರು ಮತ್ತೆ ಮೇಲೇಳಲಿಲ್ಲ. ನೀರಿನ ರೂಪದಲ್ಲಿ ಕೂತಿದ್ದ ಸಾವು, ಮೂವರನ್ನು ಒಳಗೆಳೆದುಕೊಂಡು, ಉಸಿರು ನಿಲ್ಲಿಸಿದೆ. ಇತ್ತ ದಡದ ಮೇಲಿದ್ದ ದಿವ್ಯ ಕಣ್ಮುಂದೆ ಮೂವರೂ ಜಲಸಮಾಧಿಯಾಗುತ್ತಿದ್ದನ್ನು ಕಂಡು ದಿಕ್ಕುತೋಚದಂತಾಗಿದ್ದಾರೆ. ಹೇಗೋ ಸಮಾಧಾನ ಮಾಡಿಕೊಂಡು, ಸ್ಥಳೀಯರನ್ನು ಕರೆದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿಹೋಗಿತ್ತು. ಮೂವರನ್ನೂ ನದಿ ಆಪೋಷಣೆ ತೆಗೆದುಕೊಂಡಿತ್ತು. ವಿಷಯ ತಿಳಿದು, ಸ್ಥಳಕ್ಕಾಗಮಿಸಿದ ಪೊಲೀಸರು ಸ್ವಿಮ್ಮರ್​ಗಳ ಸಹಾಯದಿಂದ ಮೂವರ ಮೃತದೇಹಗಳನ್ನು ಮೇಲೆ ತಂದರು. ಸದ್ಯ ತನಿಖೆ ಮುಂದುವರೆದಿದೆ. ಈ ವಿಡಿಯೋವನ್ನು ನೋಡಿದವರೆಲ್ಲಾ ಸಾವೇ ನೀನೆಷ್ಟು ಕ್ರೂರಿ ಎಂದು ನೊಂದುಕೊಳ್ಳುತ್ತಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا