Urdu   /   English   /   Nawayathi

ಚಿರತೆಯ ಮುಂಗಾಲು ಕತ್ತರಿಸಿ ಕಣ್ಣು ಕಿತ್ತ ಜನ.. ಇದೆಂತಾ ಸೇಡು ಅಂತೀರಾ?

share with us

ಗುವಾಹಟಿ( ಅಸ್ಸೋಂ): 01 ಜೂನ್ 2019 (ಫಿಕ್ರೋಖಬರ್ ಸುದ್ದಿ) ವ್ಯಕ್ತಿಯೋರ್ವನ ಮೇಲೆ ದಾಳಿ ದಾಳಿ ಮಾಡಿದ ಚಿರತೆಯನ್ನ ಹಿಡಿದು ಮುಂಗಾಲು, ಬಾಲ ಮತ್ತು ಕಣ್ಣುಗಳನ್ನ ಕಿತ್ತು ನೇಣಿಗೆ ಹಾಕಿರುವ ಘಟನೆ ಅಸ್ಸೋಂ ರಾಜ್ಯದ ಚರೈಡೋ ಜಿಲ್ಲೆಯ ಸೊನಾರಿ ಎಂಬಲ್ಲಿ ನಡೆದಿದೆ.

View image on Twitter

ANI@ANI

Assam: A leopard was killed, its tail, hands were severed, and it was hanged from a pole in Sonari area of Charaideo district yesterday. Forest Department has sent the body for postmortem. Case registered

209

12:25 AM - Jun 1, 2019

116 people are talking about this

Twitter Ads info and privacy

ಕಳೆದ ಕೆಲ ದಿನಗಳ ಹಿಂದೆ ನೀಲೇಶ್ವರ್​ ಚಂಗ್ಮೈ ಎಂಬ ವ್ಯಕ್ತಿಯ ಮೇಲೆ ಚಿರತೆ ದಾಳಿ ನಡೆಸಿತ್ತು. ಗಂಭೀರವಾಗಿ ಗಾಯಗೊಂಡ ನೀಲೇಶ್ವರ್​ ಸ್ಥಿತಿ ಚಿಂತಾಜನಕವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಅಸ್ಸಾಂ ಮೆಡಿಕಲ್​ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸೊನಾರಿ ಸುತ್ತಮುತ್ತ ಆಗಿಂದಾಗೆ ಚಿರತೆ ದಾಳಿ ಮಾಡುವುದರಿಂದ ಜನ ಆಕ್ರೋಶಗೊಂಡಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಗೂ ದೂರು ನೀಡಿದ್ದಾರೆ. ಆದ್ರೆ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ನಿನ್ನೆ ಚಿರತೆಯೊಂದನ್ನ ಕಂಡ ಜನ ಅದನ್ನ ಹಿಡಿದು ಮುಂಗಾಲು ಬಾಲ ಕತ್ತರಿಸಿ, ಕಣ್ಣುಗಳನ್ನ ಕಿತ್ತು ನೇಣು ಬಿಗಿದಿದ್ದಾರೆ. ಸದ್ಯ ಚಿರತೆ ದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವ ಅರಣ್ಯ ಇಲಾಖೆ, ಪ್ರಕರಣ ದಾಖಲಿಸಿಕೊಂಡಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا