Urdu   /   English   /   Nawayathi

ನಾವು ಒಟ್ಟಾಗಿದ್ದೇವೆ, ಸರ್ಕಾರ ಬಂಡೆಯಂತಿದೆ

share with us

ಬೆಂಗಳೂರು: 30 ಮೇ 2019 (ಫಿಕ್ರೋಖಬರ್ ಸುದ್ದಿ) ಶಾಸಕಾಂಗ ಪಕ್ಷದ ಸಭೆಗೆ ಎಲ್ಲ ಶಾಸಕರು ಹಾಜರಾಗಿದ್ದರು. ಯಾರೂ ಸಭೆಗೆ ಮಿಸ್‌ ಆಗಿಲ್ಲ. ಕೆಲವರು ಅನುಮತಿ ಪಡೆದು ಗೈರು ಹಾಜರಾಗಿದ್ದರು ಎಂದು ಶಾಸಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಸಭೆಗೆ ಕೆಲವರು ಬಂದಿಲ್ಲ. ಇದಕ್ಕೆ ಬೇರೆ ಕಾರಣವಿಲ್ಲ. ರಾಮಲಿಂಗಾರೆಡ್ಡಿ ಯವರು ವಿದೇಶದಲ್ಲಿದ್ದಾರೆ. ಸುಬ್ಟಾರೆಡ್ಡಿ, ರಾಜಶೇಖರ ಪಾಟೀಲ್ ಚುನಾವಣೆ ಯಿಂದ ಬಂದಿಲ್ಲ. ರಮೇಶ್‌ ಜಾರಕಿಹೊಳಿ ಹಾಗೂ ರೋಷನ್‌ ಬೇಗ್‌ ಯಾಕೆ ಬಂದಿಲ್ಲ ಎಂಬುದು ಗೊತ್ತಿಲ್ಲ. ಅವರು ಗೈರು ಹಾಜರಾಗುವ ಬಗ್ಗೆ ಅನುಮತಿ ಕೇಳಿಲ್ಲ. ಆದರೂ ಅವರೂ ಎಲ್ಲೂ ಹೋಗಿಲ್ಲ. ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ. ಕಾಂಗ್ರೆಸ್‌-ಜೆಡಿಎಸ್‌ ಶಾಸಕರು ಒಗ್ಗಟ್ಟಾಗಿ ದ್ದೇವೆ. ಸರ್ಕಾರ ಬಂಡೆಯಂತಿದೆ ಎಂದು ತಿಳಿಸಿದರು. ನಾವೆಲ್ಲರೂ ರಾಹುಲ್ ಬೆನ್ನಿಗಿದ್ದೇವೆ. ಅವರೇ ಎಐಸಿಸಿ ಅಧ್ಯಕ್ಷರಾಗಿ ಮುಂದುವರಿ ಯಲಿ ಎಂದು ಶಾಸಕಾಂಗ ಪಕ್ಷದ ಸಭೆಯಲ್ಲೂ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಉ, ವಾ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا