Urdu   /   English   /   Nawayathi

ಹಣಕಾಸಿನ ವಿಚಾರಕ್ಕೆ ಸ್ನೇಹಿತನಿಂದಲೇ ಚಾಕು ಇರಿತ

share with us

ಶಿವಮೊಗ್ಗ: 29 ಮೇ 2019 (ಫಿಕ್ರೋಖಬರ್ ಸುದ್ದಿ) ಹಣಕಾಸಿನ ವಿಚಾರದಲ್ಲಿ ವ್ಯಕ್ತಿಯೊಬ್ಬರ ಕುತ್ತಿಗೆಗೆ ಸ್ನೇಹಿತನೇ ಚಾಕುವಿನಿಂದ ಇರಿದ ಘಟನೆ ಮಂಗಳವಾರ ರಾತ್ರಿ ಅಣ್ಣಾನಗರದಲ್ಲಿ ನಡೆದಿದೆ. ಶೋಯೆಬ್ ಅಲಿಯಾಸ್ ಶೈಯು ಎಂಬಾತ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಖಾಸಿಫ್ ಎಂಬಾತ ಚಾಕುವಿನಿಂದ ಇರಿದಿದ್ದಾನೆ. ಖಾಸಿಫ್ ಇತ್ತೀಚೆಗೆ ನಡೆದಿದ್ದ ಶೋಯೇಬ್ ಮದುವೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದ. ಈ ವೇಳೆ ಶೋಯೇಬ್ ೧,೫೦೦ ರೂ. ಬಾಕಿ ಉಳಿಸಿಕೊಂಡಿದ್ದ. ಬಾಕಿ ಹಣ ನೀಡುವಂತೆ ಶೈಯು ಮಂಗಳವಾರ ಬೆಳಗ್ಗೆ ಶೋಯೇಬ್ ಮನೆಗೆ ಹೋದ ಖಾಸಿಫ್ ಬಾಕಿ ಹಣಕ್ಕೆ ಆವಾಜ್ ಹಾಕಿದ್ದ ಎನ್ನಲಾಗಿದೆ. ರಂಜಾನ್ ಮುಗಿದ ಬಳಿಕ ಹಣ ನೀಡುವುದಾಗಿ ಶೋಯೆಬ್ ಹೇಳಿದ್ದ. ಆದರೆ ಇಂದೇ ಬಾಕಿ ಹಣ ನೀಡಬೇಕು ಎಂದು ಅವ್ಯಾಚ್ಯ ಶಬ್ದಗಳಿಂದ ಶೋಯೇಬ್ಗೆ ನಿಂದಿಸಿದ್ದ. ರಾತ್ರಿ 9ಕ್ಕೆ ಮತ್ತೆ ತೆರಳಿದ ಖಾಸಿಫ್ ಅಣ್ಣಾ ನಗರದ ರೆಹಮತ್ ಕ್ಯಾಂಟೀನ್ ಬಳಿ ಶೋಯೆಬ್ನ ಕುತ್ತಿಗೆ ಇರಿದಿದ್ದಾನೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿ, ವಾ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا