Urdu   /   English   /   Nawayathi

ಮಣ್‌ಮುಕ್ಕ ಹಾವು ಮಾರುತ್ತಿದ್ದ ಮೂವರು ಖದೀಮರ ಬಂಧನ

share with us

ಚಿಕ್ಕೋಡಿ: 29 ಮೇ 2019 (ಫಿಕ್ರೋಖಬರ್ ಸುದ್ದಿ) ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಜತ್ತ ರಸ್ತೆಯಲ್ಲಿ ಮಣ್ಣುಮುಕ್ಕ (ಎರಡು ತಲೆ) ಹಾವು ಮಾರುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ, ಹಾವನ್ನು ರಕ್ಷಿಸುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಅಥಣಿ ತಾಲೂಕಿನ ಭರಮಖೋಡಿಯ ಶಕೀಲ ಬೆಳ್ಳಂಕಿ (26), ರಾವಸಾಬ ಜಾಧವ (31) ಹಾಗೂ ಅಥಣಿ ಪಟ್ಟಣದ ನಿವಾಸಿ ಶಮೀವುಲ್ಲಾ ಪಕಾಲಿ (26) ಬಂಧಿತರು. ಇನ್ನೋರ್ವ ಆರೋಪಿ ತಪ್ಪಿಸಿಕೊಂಡಿದ್ದು, ಆತನಿಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿ ಪ್ರಶಾಂತ ಗೌರಣಿ ಹಾಗೂ ಸಿಬ್ಬಂದಿಗಳಾದ ಎಸ್ ಎಂ ಮುಂಜೆ, ಆರ್ ಆರ್‌ ಪಾಟೀಲ್​, ಪ್ರಶಾಂತ ಗಂಗಾಧರ್, ಸುರೇಶ ಬಾಗಿ, ಎಸ್ ಎಂ ಗಾಲಿ, ಮಹಾಂತೇಶ ಚೌಗಲಾ, ರಾಯಪ್ಪ ಬಗಲಿ, ಮುರಗೆಪ್ಪ ಅಂಚಿಟ್ಟಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಈ, ಇ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا