Urdu   /   English   /   Nawayathi

ಬೆಳ್ತಂಗಡಿಯಲ್ಲಿ ರಸ್ತೆಯ ನಟ್ಟನಡುವೆ ಐಟಿಐ ಕಾಲೇಜಿನ ಉಪನ್ಯಾಕನ ಹತ್ಯೆ: ಮಚ್ಚು, ಲಾಂಗ್​, ಚೂರಿಯಿಂದ ಹಲ್ಲೆ

share with us

ಮಂಗಳೂರು: 28 ಮೇ 2019 (ಫಿಕ್ರೋಖಬರ್ ಸುದ್ದಿ) ಬೆಳ್ತಂಗಡಿ ತಾಲೂಕಿನ ವೇಣೂರು ಬಳಿಯ ಮುಂಡೂರು ಗ್ರಾಮದ ಕೋಟಿಕಟ್ಟೆಯಲ್ಲಿ ಮಾಲಾಡಿ ಸರ್ಕಾರಿ ಐಟಿಐ ಕಾಲೇಜಿನ ಉಪನ್ಯಾಸಕರೊಬ್ಬರನ್ನು ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ರಸ್ತೆಯ ನಟ್ಟನಡುವೆ ಹತ್ಯೆ ಮಾಡಲಾಗಿದೆ. ವಿಕ್ರಂ ಜೈನ್​ (45) ಕೊಲೆಯಾದವರು. ಸೋಮವಾರ ರಾತ್ರಿ 10 ಗಂಟೆಯಲ್ಲಿ ವಿಕ್ರಂ ಜೈನ್​ ಕೆಲವು ಯುವಕರೊಂದಿಗೆ ಮುಂಡೂರಿನಲ್ಲಿ ಇದ್ದರು ಎನ್ನಲಾಗಿದೆ. ಇದೇ ಯುವಕರ ಗುಂಪು ನಂತರದಲ್ಲಿ ಮಚ್ಚು, ಲಾಂಗ್​ ಮತ್ತು ಚೂರಿಗಳನ್ನು ಬಳಸಿ ಹಲ್ಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಹೊಟ್ಟೆ ಮತ್ತು ತಲೆಯ ಭಾಗಕ್ಕೆ ಲಾಂಗ್​ನಿಂದ ಹೊಡೆದಿರುವ ದುಷ್ಕರ್ಮಿಗಳು, ಕಿಬ್ಬೊಟ್ಟೆಗೆ ಚೂರಿಯಿಂದ ಇರಿದಿದ್ದಾರೆ. ಹಲ್ಲೆಗೆ ಬಳಸಿರುವ ಒಂದು ಲಾಂಗ್​ ರಸ್ತೆ ಬದಿಯಲ್ಲೇ ಬಿದ್ದಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಪರಿಚಿತರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ವೇಣೂರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. 

ವಿ, ವಾ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا