Urdu   /   English   /   Nawayathi

ಪೊಲೀಸ್ ಮೇಲೆ ಹಲ್ಲೆ ಆರೋಪ... ಪ್ರತಿಭಟನೆ ಮಾಡುತ್ತಿದ್ದ 9 ವಿದ್ಯಾರ್ಥಿಗಳು ಅರೆಸ್ಟ್

share with us

ಮಂಗಳೂರು: 26 ಮೇ 2019 (ಫಿಕ್ರೋಖಬರ್ ಸುದ್ದಿ) ಪೊಲೀಸ್ ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದವರನ್ನು ತಡೆಯಲು ಬಂದ ಪೊಲೀಸರ ಮೇಲೆ ಕೈಮಾಡಿದವರನ್ನು ಚದುರಿಸಲು ಲಾಠಿಚಾರ್ಜ್ ನಡೆಸಿದ ಘಟನೆ ಬೆಳ್ತಂಗಡಿ ಬಸ್ ನಿಲ್ದಾಣದ ಸಮೀಪ ನಡೆದಿದೆ.ಬೆಳ್ತಂಗಡಿಯ ಪ್ರಸನ್ನ ಕಾಲೇಜಿನ ವಿದ್ಯಾರ್ಥಿಗಳಿಬ್ಬರು ಇಂದು ಬೆಳಗ್ಗೆ ಕಾಂಗ್ರೆಸ್ - ಬಿಜೆಪಿ ಪಕ್ಷದ ಮೊಬೈಲ್ ಸಂದೇಶದ ವಿಚಾರವಾಗಿ ಹೊಡೆದಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಸಂಜೆ ಇದೆ ವಿಚಾರಕ್ಕೆ ಕಾಲೇಜಿನವರಲ್ಲದ ಹೊರಗಿನ ಸಿಎಫ್ಐ ಹಾಗೂ ಪಿಎಫ್ಐ ಎಂಬ ವಿದ್ಯಾರ್ಥಿ ಸಂಘಟನೆಯ 15 ಮಂದಿ ಯುವಕರು ಪೊಲೀಸರ ಅನುಮತಿ ಪಡೆಯದೆ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಅವ್ಯಾಚವಾಗಿ ನಿಂದನೆ ಮಾಡುತ್ತಾ ಪ್ರತಿಭಟನೆ ನಡೆಸಿದ್ದರು. ಪೊಲೀಸರು ಸ್ಥಳಕ್ಕೆ ಬಂದು ಪ್ರತಿಭಟನೆ ನಡೆಯುವುದನ್ನು ತಡೆದಾಗ ಇಬ್ಬರು ಪೊಲೀಸರ ಮೇಲೆ‌ ಸಿಎಫ್ಐ ಅಧ್ಯಕ್ಷ ನೌಫಲ್ ಎಂಬಾತ ಕೈಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಈ ವೇಳೆ ಪೊಲೀಸರು ರಕ್ಷಣೆಗಾಗಿ ಲಾಠಿ ಜಾರ್ಜ್ ಗೆ ಮುಂದಾಗಿದ್ದು, ಹಲವರು ಲಾಠಿಗೆ ಬೆದರಿ ಪಲಾಯನಗೈದಿದ್ದಾರೆ. ಇದರಲ್ಲಿ 9 ಮಂದಿಯನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಈ ಬಗ್ಗೆ ತನಿಖೆ‌ ಮುಂದುವರಿದಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا