Urdu   /   English   /   Nawayathi

ಗುಜರಿ ವ್ಯಾಪಾರಕ್ಕೆ ಜಿಲ್ಲೆಗೆ ಬಂದಿದ್ದ ತಂದೆ-ಮಗ: ವಿದ್ಯುತ್​ ತಗುಲಿ ಸಾವು

share with us

ಕಲಬುರಗಿ: 26 ಮೇ 2019 (ಫಿಕ್ರೋಖಬರ್ ಸುದ್ದಿ) ಗುಜರಿ ವ್ಯಾಪಾರಕ್ಕೆಂದು ಕಲಬುರಗಿಗೆ ಬಂದಿದ್ದ ತಂದೆ, ಮಗ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವ ಮನಕಲಕುವ ಘಟನೆ ಚಿತ್ತಾಪೂರ ತಾಲೂಕಿನ ನಾಲವಾರ್ ಗ್ರಾಮದಲ್ಲಿ ನಡೆದಿದೆ. ಯಾದಗಿರಿ ನಿವಾಸಿಗಳಾದ ಅಶೋಕ ಸೂರ್ಯಾವಂಶಿ (55) ಹಾಗೂ ಅವರ ಪುತ್ರ ಸಂತೋಷ ಸೂರ್ಯವಂಶಿ (30) ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾರೆ. ಗುಜರಿ ವಸ್ತುಗಳ ಖರೀದಿಸುತ್ತಿದ್ದ ಇವರು ಯಾದಗಿರಿಯಿಂದ ನಾಲವಾರಕ್ಕೆ ಆಗಮಿಸಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ನಾಲವಾರ ಗ್ರಾಮದಲ್ಲಿ ಹಳೆಯ ಕಬ್ಬಿಣದ ಮಂಚ ಖರೀದಿಸಿ, ಟಂಟಂ ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ಅದಕ್ಕೆ ವಿದ್ಯುತ್​ ತಂತಿ ತಗುಲಿದೆ. ತಕ್ಷಣ ವಿದ್ಯುತ್ ಪ್ರವಹಿಸಿ, ಸ್ಥಳದಲ್ಲಿಯೇ ತಂದೆ, ಮಗ ಇಬ್ಬರೂ ಮೃತಪಟ್ಟಿದ್ದಾರೆ. ಈ ವಿಷಯ ತಿಳಿದು, ಸ್ಥಳಕ್ಕಾಗಮಿಸಿದ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ, ಇ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا