Latest News:
Oman welcomes Morocco, Israel normalization ಅಪಾಯಕ್ಕೆ ಆಹ್ವಾನ: ಮಾಸ್ಕ್ ಇಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿ: ಐವನ್ ಡಿಸೋಜ ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್! ಕಾಂಗ್ರೆಸ್ನಿಂದ ಬಿಜೆಪಿ ಮುಖಂಡರ ಹೈಜಾಕ್ ಆರೋಪ: ವಿಜಯಪುರದಲ್ಲಿ ಗಲಾಟೆ, ಲಾಠಿ ಚಾರ್ಜ್ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದ ಆಶಾ ಕಾರ್ಯಕರ್ತೆ ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್ ಅಸ್ಸೋಂ ರಣಭೀಕರ ಮಳೆ... ಕಾಜಿರಂಗದಲ್ಲಿ ಪ್ರಾಣಿಗಳು ದಿಕ್ಕಾಪಾಲು
Latest News:
Oman welcomes Morocco, Israel normalization ಅಪಾಯಕ್ಕೆ ಆಹ್ವಾನ: ಮಾಸ್ಕ್ ಇಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿ: ಐವನ್ ಡಿಸೋಜ ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್! ಕಾಂಗ್ರೆಸ್ನಿಂದ ಬಿಜೆಪಿ ಮುಖಂಡರ ಹೈಜಾಕ್ ಆರೋಪ: ವಿಜಯಪುರದಲ್ಲಿ ಗಲಾಟೆ, ಲಾಠಿ ಚಾರ್ಜ್ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದ ಆಶಾ ಕಾರ್ಯಕರ್ತೆ ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್ ಅಸ್ಸೋಂ ರಣಭೀಕರ ಮಳೆ... ಕಾಜಿರಂಗದಲ್ಲಿ ಪ್ರಾಣಿಗಳು ದಿಕ್ಕಾಪಾಲು
ಶಿರಸಿ: 19 ಮೇ (ಫಿಕ್ರೋಖಬರ್ ಸುದ್ದಿ) ನಗರಕ್ಕೆ ನೀರು ಸರಬರಾಜು ಮಾಡುವ ಕೆಂಗ್ರೆ ಹೊಳೆ ಮತ್ತು ಮಾರಿಗದ್ದೆಯಲ್ಲಿ ಹರಿವು ಸಂಪೂರ್ಣ ನಿಂತಿದೆ. ಪ್ರತಿ ಮೂರು ದಿನಕ್ಕೆ ಒಮ್ಮೆ ನಗರಕ್ಕೆ ನೀರು ಬಿಡಲಾಗುತ್ತಿದ್ದರೂ ಮುಂದಿನ 10 ದಿನಗಳಿಗೆ ಅಂತೂ ಇಂತೂ ನೀರು ಸರಬರಾಜು ಮಾಡಬಹುದಾಗಿದೆ !
ಕಳೆದ ಒಂದು ತಿಂಗಳಿನಿಂದ ಮಳೆಯಾಗದಿರುವುದು ತಾಲೂಕಿನಲ್ಲಿ ತಾಪಮಾನ ಏರುವಂತೆ ಮಾಡಿದೆ. ಇದರ ಬೆನ್ನಲ್ಲೇ ಸಾರ್ವಜನಿಕರ ನೀರಿನ ಬಳಕೆಯ ಪ್ರಮಾಣವೂ ಏರಿದೆ. ಇನ್ನೊಂದೆಡೆ ನದಿಗಳು ಬತ್ತಿ ಮುಂದೆ ನಗರವಾಸಿಗಳಿಗೆ ಹೇಗೆ ನೀರು ಸರಬರಾಜು ಮಾಡಬೇಕು ಎಂದು ಅರಿಯದ ಸ್ಥಿತಿಯಲ್ಲಿ ನಗರಸಭೆ ಇದೆ. ಈಗಾಗಲೇ ಕೆಂಗ್ರೆ ಮತ್ತು ಅಘನಾಶಿನಿ ನದಿಗೆ ರೈತರು ಅಳವಡಿಸಿಕೊಂಡಿದ್ದ ಪಂಪ್ ಪಂಪ್ಗಳನ್ನು ನಗರಸಭೆ ತೆಗೆಸಿದೆ. ನಗರಸಭೆ ಸಿಬ್ಬಂದಿ ಪ್ರತಿ ದಿನ ಈ ಎರಡೂ ನದಿಗಳಲ್ಲಿ ಸಂಚರಿಸಿ ಗುಂಡಿಗಳಲ್ಲಿರುವ ನೀರನ್ನು ಪಂಪ್ ಮಾಡಿ ಜಾಕ್ವೆಲ್ಗೆ ತರುವ ಸಾಹಸ ನಡೆಸಿದ್ದಾರೆ. ನಗರವಾಸಿಗಳು ಉದ್ಯಾನಗಳಿಗೆ ನೀರು ಬಿಡುವುದು ಮತ್ತು ವಾಹನಗಳನ್ನು ತೊಳೆಯುವುದನ್ನು ಕಟ್ಟು ನಿಟ್ಟಾಗಿ ನಿಷೇಧಿಸಲಾಗಿದೆ. ಹವಾಮಾನ ಇಲಾಖೆ ಮಾನ್ಸೂನ್ ಆಗಮಿಸುವುದು ವಿಳಂಬವಾಗಲಿದೆ ಎಂಬ ಮುನ್ಸೂಚನೆ ನೀಡಿದ್ದು ನಗರವಾಸಿಗಳಿಗೆ ಇನ್ನಷ್ಟು ಆತಂಕ ಮೂಡಿಸಿದೆ. ಗುಂಡಿಗಳಲ್ಲಿ ಇರುವ ನೀರೂ ಖಾಲಿಯಾದರೆ ಮುಂದೇನು ಮಾಡಬೇಕು ಎಂಬ ಬಗ್ಗೆ ನಗರಸಭೆ ಚಿಂತಿಸಲಾರಂಭಿಸಿದೆ.
ಬಿಸಿಲಿಗೆ ಹೆದರಿದ ಜನತೆ ತಾಲೂಕಿನಲ್ಲಿ ಈಗ ತಾಪಮಾನ ಏರುವ ಜೊತೆ ಬಿಸಿಲಿನ ಝುಳವೂ ಜೋರಾಗಿದೆ. ಮಧ್ಯಾಹ್ನ 12 ಗಂಟೆಯಿಂದ ಸಂಜೆ 4ರವರೆಗೆ ನಗರದ ರಸ್ತೆಗಳಲ್ಲಿ ಸಂಚರಿಸುವವರ ಪ್ರಮಾಣ ಕಡಿಮೆಯಾಗಿದೆ. ಹಳ್ಳಗಳಲ್ಲಿ ನೀರಿನ ಹರಿವು ನಿಂತ ಕಾರಣ ಕೃಷಿ ತೋಟಗಳು ಒಣಗಲಾರಂಭಿಸಿವೆ.
ವಿ, ವಾ ವರದಿ
Fajr | فجر | |
Dhuhr | الظهر | |
Asr | أسر | |
Maghrib | مغرب | |
Isha | عشا |