Urdu   /   English   /   Nawayathi

ಬೈಕ್-ಲಾರಿ ಅಪಘಾತದಲ್ಲಿ ಬೈಕ್ ಸವಾರನ ಸಾವು

share with us

ಕುಮಟಾ: 18 ಮೇ (ಫಿಕ್ರೋಖಬರ್ ಸುದ್ದಿ) ಕುಮಟಾದ ಹಂದಿಗೋಣದಲ್ಲಿ ಬೈಕ್ ಹಾಗೂ ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ಪಟ್ಟ ಬೈಕ್ ಸವಾರ ಹಂದಿಗೋಣ ಕುಮಟಾದ ನಿವಾಸಿ ವಿನೋದ್ ಲಕ್ಷಣ ಮುಕ್ರಿ ಎಂದು ಗುರುತಿಸಲಾಗಿದೆ. ಲಕ್ಷಣ್ ಕುಮಟಾದಿಂದ ಹಂದಿಗೋಣ ಹೋಗುವ ವೇಳೆ ಮಂಗಳೂರಿನಿಂದ ಅತಿವೇಗದಲ್ಲಿ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಂದಕದಲ್ಲಿ ಬಿದ್ದು, ತಲೆಗೆ ಬಲವಾದ ಪೆಟ್ಟಾದ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕುಮಟಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا