Urdu   /   English   /   Nawayathi

ವಿದ್ಯಾಕಾಶಿಯಲ್ಲಿ ಗಾಂಜಾ ಮಾಫಿಯಾ: ವಿದ್ಯಾರ್ಥಿಗಳ ಮೇಲಿನ ರೌಡಿ ಶೀಟರ್ಸ್​ ಹಲ್ಲೆಗೆ ಬಿಗ್​ ಟ್ವಿಸ್ಟ್​!

share with us

ಧಾರವಾಡ: 06 ಮೇ (ಫಿಕ್ರೋಖಬರ್ ಸುದ್ದಿ) ಧಾರವಾಡದಲ್ಲಿ ರೌಡಿ ಶೀಟರ್​ಗಳು ಕಾಲೇಜು ವಿದ್ಯಾರ್ಥಿಗಳ ನಡೆಸಿದ್ದ ಮೇಲೆ ನಡೆಸಿದ್ದ ಹಲ್ಲೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್ ಸಿಕ್ಕಿದೆ. ಅವಳಿ ನಗರದಲ್ಲಿ ಗಾಂಜಾ ಮಾಫಿಯಾ ತಲೆಯತ್ತಿದೆ ಎಂಬ ಶಂಕೆ ವ್ಯಕ್ತ ವಾಗುತ್ತಿದೆ. ಹೌದು, ಗಾಂಜಾ ಸೇದಲು ತೆರಳಿದ್ದ ಯುವಕರನ್ನು ರೌಡಿಶೀಟರ್ ಸಹೋದರರು ಸೇರಿ ಹಿಗ್ಗಾಮುಗ್ಗಾ ಥಳಿಸಿದ್ದ ಘಟನೆ ಭಾನುವಾರ ಬೆಳಕಿಗೆ ಬಂದಿತ್ತು. ವಿದ್ಯಾರ್ಥಿಗಳನ್ನು ಥಳಿಸಿರುವ ವಿಡಿಯೋವೊಂದು ಈಗ ವೈರಲ್ ಆಗಿದೆ. ಧಾರವಾಡದ ಪ್ರತಿಷ್ಠಿತ ಕಾಲೇಜ್​ವೊಂದರ ವಿದ್ಯಾರ್ಥಿಗಳು ತಮ್ಮ ಗೆಳೆಯರ ಜೊತೆ ಸೇರಿ ಧಾರವಾಡ ಹೊರವಲಯದ ಲಕ್ಷ್ಮಿ ಸಿಂಗನಕೇರಿ ಏರಿಯಾದಲ್ಲಿ ನಸುಕಿನಜಾವ 3.30ರ ಸುಮಾರಿಗೇ ಗಾಂಜಾ ಹೊಡೆಯಲು ತೆರಳಿದ್ದರು. ಆಗ ರೌಡಿ ಶೀಟರ್ ಮಂಜುನಾಥ ಹಿರೇಮನಿ ಹಾಗೂ ಆತನ ಸಹೋದರ ತಿರುಪತಿ ಹಿರೇಮನಿ ಮತ್ತ ಅನುರಾಗ್ ಹಿರೇಮನಿ ಈ ಮೂವರು ಸೇರಿ ವಿದ್ಯಾರ್ಥಿಗಳನ್ನು ಮನಬಂದಂತೆ ಥಳಿಸಿದ್ದರು. ಥಳಿಸಿದ ನಂತರ ವಿದ್ಯಾರ್ಥಿಗಳನ್ನು ನಿಲ್ಲಿಸಿ ವಿಡಿಯೋ ಸಹ ಮಾಡಿದ್ದರಂತೆ. ಸದ್ಯ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯಿಂದ ವಿದ್ಯಾಕಾಶಿಯಲ್ಲೂ ಎಗ್ಗಿಲ್ಲದೆ ಗಾಂಜಾ ಮಾರಾಟ ಆಗ್ತಿದೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.

ಈ, ಇ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا