Urdu   /   English   /   Nawayathi

ಹಾಲು ಒಕ್ಕೂಟ ಚುನಾವಣೆಯಲ್ಲಿ ಎರಡು ಗುಂಪಿನ ಮಧ್ಯೆ ಗಲಾಟೆ : ಶಿವಮೊಗ್ಗದಲ್ಲಿ ಲಾಠಿ ಪ್ರಹಾರ

share with us

ಶಿವಮೊಗ್ಗ: 29 ಏಪ್ರಿಲ್ (ಫಿಕ್ರೋಖಬರ್ ಸುದ್ದಿ)ದಾವಣಗೆರೆ, ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಚುನಾವಣೆಯ ವೇಳೆ ಗಲಾಟೆ ನಡೆದಿದ್ದು, ಎರಡು ಗುಂಪುಗಳನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಶಿವಮೊಗ್ಗ ತಾಲೂಕಿನ ಮಾಚೇನಹಳ್ಳಿಯ ಶಿಮುಲ್ (ಶಿವಮೊಗ್ಗ ಹಾಲು ಒಕ್ಕೂಟ ಮಂಡಳಿ) ಕಚೇರಿಯಲ್ಲಿ ಇಂದು ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯುತ್ತಿದ್ದು, ಈ ವೇಳೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬಣಕಾರ್ ಹಾಗೂ ಮಲ್ಲೇಶಪ್ಪ ಎಂಬಿಬ್ಬರ ಬೆಂಬಲಿಗರ ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ. ಪೊಲೀಸರು ಗುಂಪು ಚದುರಿಸುವ ಯತ್ನ ಮಾಡಿದರೂ ಸಹ, ಪೊಲೀಸರ ಮಾತು ಕೇಳದೆ ಗುಂಪಿನವರು ಹೊಡೆದಾಟ ನಡೆಸಲು ಶುರು ಮಾಡಿದ್ದಾರೆ. ಈ ಸಂದರ್ಭ ಪೊಲೀಸರು ಉದ್ರಿಕ್ತರನ್ನ ಚದುರಿಸಲು ಲಾಠಿ ಬೀಸಿದ್ದಾರೆ. ಪೊಲೀಸರ ಲಾಠಿ ರುಚಿ ನೋಡುತ್ತಿದ್ದಂತೆಯೇ ಗುಂಪಿನಲ್ಲಿದ್ದವರು ಚೆಲ್ಲಾಪಿಲ್ಲಿಯಾಗಿ ಓಡಿ ಹೋದರು. ನಂತರ ಪೊಲೀಸರು ಶಿಮುಲ್ ಮುಂಭಾಗ ನಿಂತಿದ್ದ ಜನರನ್ನು ಚದುರಿಸಿದರು. ಬೆಳಗ್ಗೆ 10 ಗಂಟೆಯಿಂದ ಚುನಾವಣೆ ಪ್ರಾರಂಭವಾಗಿದ್ದು, ಸಂಜೆ ನಾಲ್ಕು ಗಂಟೆವರೆಗೂ ನಡೆಯಿತು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا