Urdu   /   English   /   Nawayathi

ಮಗಳ ಐಎಎಸ್ ಅಧಿಕಾರಿ ಕನಸನ್ನ ಪೂರ್ಣಗೊಳಿಸಲು ಹೊರಟ ತಂದೆ ಅಪಘಾತದಲ್ಲಿ ಸಾವು

share with us

ಚಿಕ್ಕಬಳ್ಳಾಪುರ: 28 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಮಗಳನ್ನು ಐಎಎಸ್ ಅಧಿಕಾರಿ ಮಾಡುವ ಕನಸನ್ನು ಹೊತ್ತು ನೆರೆ ರಾಜ್ಯದ ಹೈದರಾಬಾದ್‍ಗೆ ಮಗಳನ್ನು ಕರೆದೊಯ್ಯುವಾಗ ಅಪಘಾತ ಸಂಭವಿಸಿ ತಂದೆ ಸಾವನ್ನಪ್ಪಿ ಮಗಳು ಗಂಭೀರ ಗಾಯಗೊಂಡಿರುವ ದುರ್ಘಟನೆ ಇಂದು ಮುಂಜಾನೆ ಆಂಧ್ರಪ್ರದೇಶದ ಅನಂತಪುರದಲ್ಲಿ ನಡೆದಿದೆ. ಚಿಂತಾಮಣಿ ನಗರದ ಮಂಜುನಾಥ್‍ಅಯ್ಯರ್ (45) ಮೃತಪಟ್ಟ ದುರ್ದೈವಿ ತಂದೆ. ಚಿಂತಾಮಣಿಯಲ್ಲಿ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುತ್ತಿದ್ದ ಮಂಜುನಾಥ್ ಅಯ್ಯರ್ ಮಗಳಾದ ಕಾವ್ಯ ಅವರನ್ನು ಐಎಎಸ್ ಅಧಿಕಾರಿ ಮಾಡುವ ಕನಸು ಹೊಂದಿದ್ದರು. ತರಬೇತಿಗಾಗಿ ಹೈದರಾಬಾದ್‍ಗೆ ಬಿಡಲು ಕಾರಿನಲ್ಲಿ ತೆರಳುತ್ತಿದ್ದಾಗ ಮಾರ್ಗಮಧ್ಯೆ ಅನಂತಪುರದ ಬಳಿ ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬಂದ ಲಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಮಂಜುನಾಥ್ ಅವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಾಲಕ ಯಲ್ಲಪ್ಪ , ಮಗಳು ಕಾವ್ಯ ಹಾಗೂವಿನಯ್ ಎಂಬುವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅನಂತಪುರ ಜಿಲ್ಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا