Urdu   /   English   /   Nawayathi

ಮೀನುಗಾರರ ಮುಖಂಡ ಮತ್ತು ಬೈಂದೂರು ಶಾಸಕ ನಡುವೆ ಜಟಾಪಟಿ: ವಿಡಿಯೋ ವೈರಲ್​​

share with us

ಉಡುಪಿ: 20 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಮೀನುಗಾರರ ಮಖಂಡ ಜಿ.ಶಂಕರ್ ಮತ್ತು ಬೈಂದೂರು ಶಾಸಕ ಸುಕುಮಾರ ಶೆಟ್ಟಿ ನಡುವೆ ನಡೆದ ಜಟಾಪಟಿಯ ವಿಡಿಯೋ ಇದೀಗ ಸಖತ್​ ವೈರಲ್ ಆಗುತ್ತಿದೆ. ಬೈಂದೂರಿನಲ್ಲಿ ನಡೆದ ಸ್ಟೇಜ್ ಕಾರ್ಯಕ್ರಮದ ಬಳಿಕ ಮುಖಾಮುಖಿಯಾದಂತೆ ಕಾಣುವ ವಿಡಿಯೋದಲ್ಲಿ ಜಿ.ಶಂಕರ್ ಏರುಧ್ವನಿಯಲ್ಲಿ ಸುಕುಮಾರ್ ಶೆಟ್ಟಿ ಅವರಿಗೆ ಉಡಾಫೆ ಮಾತನಾಡಬೇಡಿ, ಇದೆಲ್ಲಾ ನಡೆಯುವುದಿಲ್ಲ. ನಿಮಗೆ ನೆತ್ತಿಗೆ ಏರಿದೆಯೇ? ನಾನು ಹೇಳಿದ್ದು ಮಾಡುತ್ತೇನೆ. ಕಾಂಗ್ರೆಸ್​ನವರನ್ನು ಬಿಟ್ಟುಬಿಡಿ. ನೀವು ಏನು ಮಾಡಿದ್ರಿ ಹೇಳಿ ಎಂದು ಕ್ಲಾಸ್​ ತೆಗೆದುಕೊಂಡಿದ್ದಾರೆ. ನಾನು ಹತ್ತು ವರ್ಷ ಯಡಿಯೂರಪ್ಪನವರ ಬಳಿ ಫೈಲ್ ಹಿಡಿದು ತಿರುಗಾಡಿದ್ದೇನೆ. ಯಡಿಯೂರಪ್ಪ ನಿಮ್ಮ ಗುರುಗಳು, ಕೆಲಸ ಮಾಡಬೇಕಾಗಿತ್ತಲ್ಲ. ಕರಾವಳಿಯವರ ವೋಟು ಬೇಡವೆ ನಿಮಗೆ?. ನೀವು ಬಂದು ಏನು‌ ಮಾಡಿದ್ರಿ ಹೇಳಿ. 9 ರೂಪಾಯಿ ಡಿಸೇಲ್ ಸಬ್ಸಿಡಿ ಕೊಟ್ರು ಮೀನುಗಾರರಿಗೆ. ನಿಮ್ಮ ಹತ್ರ ದೊಡ್ಡ ದೊಡ್ಡ ಕ್ಷಿಪಣಿ ಎಲ್ಲಾ ಇದೆ. ಏಳು ಜನ ಮೀನುಗಾರರನ್ನು ಹುಡುಕಲು ಆಗಿಲ್ಲಾ ಅಂದರೆ ಮೋದಿ ಏನು ಮಾಡ್ತಾರೆ ಎಂದು ಪ್ರಶ್ನಿಸಿದ್ದಾರೆ. ವಿಚಾರದ ಗಂಭೀರತೆಯನ್ನು ಅರಿತ ಬಿಜೆಪಿ ಪದಾಧಿಕಾರಿಗಳು ಮತ್ತು ಮೀನುಗಾರರ ಮುಖಂಡರು ಇಬ್ಬರನ್ನು ಸಂತೈಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا