Urdu   /   English   /   Nawayathi

ಕಣಿವೆ ರಾಜ್ಯದಲ್ಲಿ ಉಗ್ರರ ಅಟ್ಟಹಾಸ... ಗಂಭೀರ ಗಾಯಗೊಂಡಿದ್ದ ಆರೆಸ್ಸೆಸ್​ ನಾಯಕ ನಿಧನ

share with us

ಕಿಶ್ತವಾರ್​: 10 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಕಣಿವೆ ರಾಜ್ಯದಲ್ಲಿ ಮಂಗಳವಾರ ಉಗ್ರರ ದಾಳಿಗೆ ಗಂಭೀರವಾಗಿ ಗಾಯಗೊಂಡಿದ್ದ ಆರೆಸ್ಸೆಸ್​ ನಾಯಕ ಚಂದ್ರಕಾಂತ್ ಶರ್ಮಾ ಅಸುನೀಗಿದ್ದಾರೆ. ಆಸ್ಪತ್ರೆಯೊಂದರಲ್ಲಿ ಮೆಡಿಕಲ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶರ್ಮಾರ ಆಸ್ಪತ್ರೆಗೆ ನುಗ್ಗಿದ್ದ ಆಗಂತುಕ, ಗಾರ್ಡ್​ ಹಾಗೂ ಶರ್ಮಾರ ಮೇಲೆ ಗುಂಡಿನ ಮಳೆಗರೆದಿದ್ದ. ಈ ದಾಳಿಯಲ್ಲಿ ಸೆಕ್ಯೂರಿಟಿ ಗಾರ್ಡ್ ರಾಜಿಂದರ್​​ ಕುಮಾರ್ ​ ಸ್ಥಳದಲ್ಲೇ ಅಸುನೀಗಿದ್ದ. 

ಸಂಬಂಧಿತ ಸುದ್ದಿ: ಗಂಭೀರವಾಗಿ ಗಾಯಗೊಂಡಿದ್ದ ಚಂದ್ರಕಾಂತ್ ಶರ್ಮಾರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಚಿಕಿತ್ಸೆ ಫಲಕಾರಿಗದೆ ಶರ್ಮಾ ಕೊನೆಯುಸಿರೆಳೆದಿದ್ಧಾರೆ. ಘಟನೆ ನಡೆದ ಕ್ಷಣದಿಂದಲ್ಲೇ ಕಿಶ್ತವಾರ್​ನಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಜೊತೆಗೆ ಇಂಟರ್​ನೆಟ್ ಸಂಪರ್ಕವನ್ನೂ ಸ್ಥಗಿತಗೊಳಿಸಲಾಗಿದೆ. ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ, ಎನ್​ಸಿಪಿ ನಾಯಕ ಒಮರ್​ ಅಬ್ದುಲ್ಲಾ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا