Urdu   /   English   /   Nawayathi

ಯೋಗಿ ಭಾಷಣ ಅರ್ಥವಾಗದೇ ಅರ್ಧಕ್ಕೆ ಎದ್ದು ಹೋದ ಜನ...!

share with us

ಹೈದರಾಬಾದ್​: 09 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಯೋಗಿ ಆದಿತ್ಯನಾಥ, ಬಿಜೆಪಿಯ ಫೈರ್​ ಬ್ರಾಂಡ್​.. ಮೋದಿ ಹೊರತುಪಡಿಸಿದರೆ ಬಿಜೆಪಿಯ ಲೀಡಿಂಗ್​ ಕ್ಯಾಂಪೇನರ್​. ನಿನ್ನೆ ಉತ್ತರಪ್ರದೇಶ ಸಿಎಂ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಎಲ್ಲಾರೆಡ್ಡಿಯಲ್ಲಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಾರ್ವಜನಿಕ ಸಭೆಯಲ್ಲಿ ಟಿಆರ್​ಎಸ್​ ಸರ್ಕಾರದ ವಿರುದ್ಧ ವಾಗ್ದಾಳಿ ಶುರು ಮಾಡಿದ್ದರು. ಆದರೆ ಯೋಗಿ ಆದಿತ್ಯನಾಥರ ಭಾಷಣವನ್ನ ಕೇಳಲು ಜನರೇ ಇರಲಿಲ್ಲ. ಭಾಷಣ ಆರಂಭಕ್ಕೂ ಮುನ್ನ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಯೋಗಿ ಭಾಷಣ ಆರಂಭವಾಗುತ್ತಿದ್ದಂತೆ ಮಹಿಳೆಯರು, ರೈತರು ಯೋಗಿ ಆದಿತ್ಯನಾಥರ ಹಿಂದಿ ಅರ್ಥವಾಗದೇ ಅರ್ಧದಲ್ಲೇ ಎದ್ದು ಹೋರ ನಡೆದರು ಎನ್ನಲಾಗಿದೆ. ನಮಗೆ ಅವರು ಏನು ಹೇಳುತ್ತಿದ್ದಾರೆ ಎಂಬುದೇ ಅರ್ಥವಾಗ್ತಿಲ್ಲ ಎಂದ ಮಹಿಳೆಯರು, ಕನಿಷ್ಠ ಅವರ ಭಾಷಣ ತೆಲುಗಿಗೆ ಭಾಷಾಂತರ ಮಾಡುವವರನ್ನ ಬಿಜೆಪಿಯವರು ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಈ ಮಧ್ಯೆ, ಸಂಘಟಕರು ಜನರನ್ನ ಹಿಡಿದಿಟ್ಟುಕೊಳ್ಳಲು ಹರಸಾಹಸ ಪಡಬೇಕಾದ ಘಟನೆಯೂ ನಡೆಯಿತು.

ಈ, ಇ ವರದಿ 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا