Urdu   /   English   /   Nawayathi

ದೆಹಲಿ-ಭುವನೇಶ್ವರ್ ಎಕ್ಸ್ ಪ್ರೆಸ್ ರೈಲಲ್ಲಿ ಊಟ ಸೇವಿಸಿದ 20 ಮಂದಿ ಅಸ್ವಸ್ಥ..!

share with us

ನವದೆಹಲಿ: 07 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ರೈಲುಗಳಲ್ಲಿ ನೀಡುವ ಆಹಾರಗಳು ಕಳಪೆ ಗುಣಮಟ್ಟದಿಂದ ಕೂಡಿರುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ನವದೆಹಲಿ- ಭುವನೇಶ್ವರ್ ಎಕ್ಸ್‍ಪ್ರೆಸ್ ರೈಲಿನಲ್ಲಿ ಊಟ ಸೇವಿಸಿದ 20 ಮಂದಿ ಅಸ್ವಸ್ಥರಾಗಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಊಟ ಸೇವಿಸಿ ಅಸ್ವಸ್ಥರಾಗಿರುವವರಲ್ಲಿ ಮಕ್ಕಳೇ ಹೆಚ್ಚು. ಬೋಕಾರೋ ರೈಲ್ವೆ ನಿಲ್ದಾಣದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಸುದ್ದಿಗಾರರಿಗೆ ತಿಳಿಸಿದ್ದಾರೆ. ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಆಹಾರವನ್ನು ವಿತರಿಸಲಾಗಿದ್ದು, ಇದನ್ನು ಸೇವಿಸಿದ ನಂತರ ಪ್ರಯಾಣಿಕರು ಹೊಟ್ಟೆನೋವಿನಿಂದ ಬಳಲಿದರೆ, ಇನ್ನು ಹಲವರು ವಾಂತಿ ಹಾಗೂ ಭೇದಿಯಿಂದ ಸುಸ್ತಾಗಿದ್ದು ಅವರನ್ನು ಬೋಕಾರೋ ರೈಲ್ವೆ ನಿಲ್ದಾಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಅಸ್ವಸ್ಥರಾದವರೆಲ್ಲ ಬಿ3, ಬಿ5, ಬಿ7 ಹಾಗೂ ಬಿ 9 ಕೋಚ್‍ಗಳಲ್ಲಿ ಪ್ರಯಾಣಿಸುತ್ತಿದ್ದವರೇ ಹೆಚ್ಚಾಗಿದ್ದಾರೆ. ಪ್ರಯಾಣಿಕರಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಡಿಸಿರುವುದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا