Urdu   /   English   /   Nawayathi

ಮೋದಿಗಿಂತ ಕೆಸಿಆರ್ ನಿಜವಾದ ಹಿಂದೂ: ಪ್ರಧಾನಿ ವಿರುದ್ಧ ಓವೈಸಿ ಚಾಟಿ

share with us

ಹೈದರಾಬಾದ್​: 06 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಪ್ರಧಾನಿ ಮೋದಿಗಿಂತ ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್​ ಅವರು ನಿಜವಾದ ಹಿಂದೂ ಎಂದು ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್​ ಓವೈಸಿ ಹೇಳಿದ್ದಾರೆ. ನಲಗೊಂಡದ ಪ್ರಚಾರಸಭೆಯಲ್ಲಿ ಮಾತನಾಡಿದ ಅವರು, ಕೆಸಿಆರ್​ಗೆ ಪ್ರಧಾನಿ ಮೋದಗಿಂತ ದೊಡ್ಡ ಹೃದಯವಿದೆ. ಮೋದಿಗಿಂತ ಕೆಸಿಆರ್​ ದೊಡ್ಡ ಹಿಂದೂ. ಇಬ್ಬರು ಹಿಂದುತ್ವದ ನಡುವೆ ಸಾಕಷ್ಟು ವ್ಯತ್ಯಾಸವಿದೆ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಿಂದುತ್ವ ಎಂಬುದು ಭಾರತದ ಜಾತೀಯತೆಯನ್ನು ತೊಡೆದುಹಾಕುವುದು. ಸಾಂಸ್ಕೃತಿಕ ಸಮ್ಮಿಲನ, ವಿಶ್ವ ಸಹೋದರತ್ವವನ್ನು ಹಿಂದುತ್ವ ಸಾರುತ್ತದೆ ಎಂದರು. ಟಿಆರ್​ಎಸ್​ ಅಭ್ಯರ್ಥಿ ವೆಮಿರೆಡ್ಡಿ ನರಸಿಂಹ ರೆಡ್ಡಿ ಪರ ಅವರು ಮತಯಾಚನೆ ಮಾಡಿದರು. ಈ ವೇಳೆ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವವರೆಗೆ ಗಡ್ಡ ತೆಗೆಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುವ ಟಿಪಿಸಿಸಿಯ ಅಧ್ಯಕ್ಷ ಎನ್​ ಉತ್ತಮ್ ಕುಮಾರ್​ರ ಕಾಲೆಳೆದ ಅವರು, ಉತ್ತಮ ಗಡ್ಡ ಈಗಾಗಲೆ ನನ್ನ ಗಡ್ಡದಷ್ಟು ಬೆಳೆದಿದೆ. ಇನ್ನು 10 ವರ್ಷಗಳಾದ ಮೇಲೆ ಎಷ್ಟು ಉದ್ದ ಬೆಳೆಯುತ್ತೆ ಎಂದು ಕುಟುಕಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا