Urdu   /   English   /   Nawayathi

ಶ್ರೀನಗರ ಸೆಂಟ್ರಲ್‌ ಜೈಲಿನಲ್ಲಿ ಕೈದಿಗಳು, ಸಿಬಂದಿಗಳ ಮಾರಾಮಾರಿ, ಪರಿಸ್ಥಿತಿ ನಿಯಂತ್ರಣದಲ್ಲಿ

share with us

ಶ್ರೀನಗರ: 06 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಇಲ್ಲಿನ ಸೆಂಟ್ರಲ್‌ ಜೈಲಿನಲ್ಲಿ ಕೈದಿಗಳು ಮತ್ತು ಬಂಧೀಖಾನೆ ಸಿಬಂದಿಗಳ ನಡುವೆ ಮಾರಾಮಾರಿ ನಡೆದ ಘಟನೆ ವರದಿಯಾಗಿದೆ. ನಿನ್ನೆ ಗುರುವಾರ ರಾತ್ರಿ ಕೆಲವೊಂದು ಬ್ಯಾರಾಕ್‌ ಗಳ ನವೀಕರಣಕ್ಕಾಗಿ ಅಲ್ಲಿ ಇರಿಸಲಾಗಿದ್ದ ಕೈದಿಗಳನ್ನು ಬೇರೆ ಬ್ಯಾರಕ್‌ಗಳಿಗೆ ಶಿಫ್ಟ್ ಮಾಡಲು ಮುಂದಾದ ಜೈಲು ಸಿಬಂದಿಗಳ ವಿರುದ್ಧ ಕೈದಿಗಳು ಆಕ್ರೋಶ ವ್ಯಕ್ತಪಡಿಸಿ ಕಾಳಗಕ್ಕೆ ಇಳಿದರು. ಕಾಶ್ಮೀರ ಕಣಿವೆಯ ಹೊರಗೆ ಎಲ್ಲೋ ಒಂದೆಡೆ ತಮ್ಮನ್ನು ಜೈಲಿನಲ್ಲಿ ಕೂಡಿ ಹಾಕಲಾಗುವುದೆಂಬ ಭೀತಿ, ಆತಂಕವೇ ಕೈದಿಗಳ ಆಕ್ರೋಶಕ್ಕೆ ಕಾರಣವೆಂದು ಹೇಳಲಾಗಿದೆ. ಜಗಳದ ಪರಾಕಾಷ್ಠೆಯಲ್ಲಿ ಕೆಲವು ಕೈದಿಗಳು ಬಂಧೀಖಾನೆಯಲ್ಲಿದ್ದ ಗ್ಯಾಸ್‌ ಸಿಲಿಂಡರ್‌ಗಳಿಗೆ ಬೆಂಕಿ ಹಚ್ಚಿದರಲ್ಲದೆ ಜೈಲಿನ ಸೊತ್ತುಗಳನ್ನು ಧ್ವಂಸಗೊಳಿಸಲು ಮುಂದಾದರು. ಆಕ್ರೋಶಿತ ಕೈದಿಗಳು ಕನಿಷ್ಠ ಎರಡು ಬ್ಯಾರಾಕ್‌ಗಳಿಗೆ ಮತ್ತು ಜೈಲಿನ ಮೆಸ್‌ ಗೆ ಬೆಂಕಿ ಹಚ್ಚಿದರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧೀಖಾನೆಯೊಳಗಿನ ಉದ್ರಿಕ್ತ ಪರಿಸ್ಥಿತಿಯನ್ನು ಕೂಡಲೇ ನಿಯಂತ್ರಣಕ್ಕೆ ತರಲಾಗಿದೆ ಮತ್ತು ಅಲ್ಲಿನ ಸ್ಥಿತಿಗತಿಯ ಮೇಲೆ ನಿಕಟ ಕಣ್ಗಾವಲು ಇರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು. ಈ ನಡುವೆ ಶ್ರೀನಗರ ಸಿಟಿಯಲ್ಲಿ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ; ಅಂತೆಯೇ ದಕ್ಷಿಣ ಕಾಶ್ಮೀರದಲ್ಲಿ ಇಂಟರ್‌ನೆಟ್‌ ವೇಗವನ್ನು ತಗ್ಗಿಸಲಾಗಿದೆ; ಹಳೇ ನಗರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಳು ಹೇಳಿದ್ದಾರೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا