Urdu   /   English   /   Nawayathi

‘ಎಲೆಕ್ಷನ್‌ ಬಳಿಕ ಕುಮಾರಸ್ವಾಮಿ ನೆಗೆದು ಬೀಳ್ತಾರೆ’: ಈಶ್ವರಪ್ಪ ಲೂಸ್‌ ಟಾಕ್‌

share with us

ಕೊಪ್ಪಳ: 02 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ರಾಜ್ಯದೆಲ್ಲೆಡೆ ಲೋಕಸಭಾ ಚುನಾವಣೆಯ ಪ್ರಚಾರದ ಕಾವು ಏರುತ್ತಿದೆ. ಇತ್ತ ಪಕ್ಷಗಳ ನಾಯಕರ ಮಾತಿನ ಕಾವೂ ಸಹ ಜೋರಾಗಿದೆ. ಸ್ಟಾರ್‌ ಕ್ಯಾಂಪೇನರ್‌ ಗಳು, ರಾಜಕೀಯ ಪಕ್ಷದಲ್ಲಿನ ಪ್ರಮುಖ ಮುಖಂಡರು ಹಾಗೂ ತಮ್ಮ ಪಕ್ಷದ ಅಭ್ಯರ್ಥಿಗೆ ಪ್ರಬಲ ಪ್ರತಿಸ್ಪರ್ಧೆ ನೀಡುತ್ತಿರುವ ಅಭ್ಯರ್ಥಿಗಳನ್ನು ಗುರಿಯಾಗಿಸಿಕೊಂಡು ರಾಜಕೀಯ ನಾಯಕರು ಹಾಗೂ ಪಕ್ಷಗಳ ಮುಖಂಡರು ತಮ್ಮ ನಾಲಗೆಯನ್ನು ಹರಿಬಿಡುತ್ತಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಎಂದರೆ ಭಾರತೀಯ ಜನತಾ ಪಕ್ಷದ ಕೆ.ಎಸ್‌. ಈಶ್ವರಪ್ಪ ನೀಡಿರುವ ಹೊಸ ಹೇಳಿಕೆ. ಕೊಪ್ಪಳದಲ್ಲಿ ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಕೆ.ಎಸ್‌. ಈಶ್ವರಪ್ಪ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಟೀಕಾಪ್ರಹಾರವನ್ನು ನಡೆಸಿದರು ಮಾತ್ರವಲ್ಲದೇ ಇನ್ನಷ್ಟು ಮುಂದುವರೆದು, ‘ಈ ಲೋಕಸಭಾ ಚುನಾವಣೆಯ ಬಳಿಕ ಕುಮಾರಸ್ವಾಮಿಯವರು ನೆಗೆದುಬೀಳ್ತಾರೆ ಆಗ ಅವರ ಸರಕಾರವೂ ಬಿದ್ದು ಹೋಗುತ್ತೆ’ ಎಂಬ ಕೀಳು ಮಟ್ಟದ ಹೇಳಿಕೆಯನ್ನು ನೀಡಿದ್ದಾರೆ.

ಜೆಡಿಎಸ್‌ ಇದುವರೆಗೂ ಕಾರ್ಯಕರ್ತರನ್ನು ಬೆಳೆಸಿಲ್ಲ. ಕೇವಲ ಗೌಡರ ಕುಟುಂದ ನಾಲ್ಕೈದು ಜನ ಸೇರಿಕೊಂಡು ಕಣ್ಣೀರು ಹಾಕುತ್ತಾರೆ ಆದರೆ ಇದು ಹೆಚ್ಚು ದಿನ ನಡೆಯುವುದಿಲ್ಲ ಎಂದು ಈಶ್ವರಪ್ಪ ಇದೇ ಸಂದರ್ಭದಲ್ಲಿ ಹೇಳಿದರು. ದೇವೇಗೌಡರೇ ನಿಮ್ಮ ಪಕ್ಷ ಈ ಬಾರಿ 1 ಸ್ಥಾನವನ್ನೂ ಗೆಲ್ಲುವುದಿಲ್ಲ, ಬಿಜೆಪಿ ರಾಜ್ಯದಲ್ಲಿ ಈ ಬಾರಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا