Urdu   /   English   /   Nawayathi

ಕುರುಡು ಕಾಂಚಾಣ! IT ದಾಳಿ-ಸಿಮೆಂಟ್ ಗೋದಾಮಿನಲ್ಲಿ ಕೋಟಿ, ಕೋಟಿ ಹಣ ಪತ್ತೆ

share with us

ಚೆನ್ನೈ: 01 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಕರ್ನಾಟಕದಲ್ಲಿ ಐಟಿ ದಾಳಿ ನಡೆದ ಬೆನ್ನಲ್ಲೇ ಇದೀಗ ತಮಿಳುನಾಡಿನ ವಿವಿಧೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಭರ್ಜರಿ ಬೇಟೆಯಾಡಿದ್ದಾರೆ. ವೆಲ್ಲೂರು ಗೋಡೌನ್ ವೊಂದರಲ್ಲಿ ಕೋಟಿ, ಕೋಟಿ ನಗದು ದೊರೆತಿದ್ದು, ಪ್ರತಿ ನೋಟಿನ ಬಂಡಲ್ ಮೇಲೆ ವಾರ್ಡ್ ನಂಬರ್ ನಮೂದಿಸಿರುವುದು ಪತ್ತೆಯಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಸಿಮೆಂಟ್ ಗೋಡೌನ್ ನಲ್ಲಿ ಪತ್ತೆಯಾಗಿರುವ 9ಕೋಟಿಗಿಂತಲೂ ಅಧಿಕ ಹಣ ಡಿಎಂಕೆ ಪಕ್ಷದ ಖಜಾಂಚಿ ಎಸ್.ದೊರೈ ಮುರುಗನ್ ಅವರಿಗೆ ಸೇರಿದ್ದರಬಹುದು ಎಂದು ಐಟಿ ಅಧಿಕಾರಿಗಳು ಶಂಕಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ಮುರುಗನ್ ಅವರ ನಿವಾಸ, ಕಚೇರಿ ಮೇಲೆ ಐಟಿ ದಾಳಿ ನಡೆದಿತ್ತು. ಸೋಮವಾರ ಬೆಳಗ್ಗೆ ದೊರೈ ಮುರುಗನ್ ಅವರ ಆಪ್ತ ಶ್ರೀನಿವಾಸನ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಪತ್ತೆಯಾಗಿರುವ ಹಣದ ಮೂಲಗಳ ಬಗ್ಗೆ ವಿಚಾರಣೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا