Urdu   /   English   /   Nawayathi

ಅಪಘಾತ: ಗಾಯಗೊಂಡಿದ್ದ ಪತ್ರಕರ್ತನನ್ನು ಆಸ್ಪತ್ರೆಗೆ ದಾಖಲಿಸಿದ ರಾಹುಲ್ ಗಾಂಧಿ

share with us

ನವದೆಹಲಿ: 27 ಮಾರ್ಚ್ (ಫಿಕ್ರೋಖಬರ್ ಸುದ್ದಿ) ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಪತ್ರಕರ್ತರೊಬ್ಬರನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮಾನವೀಯತೆ ಮೆರೆದಿದ್ದಾರೆ. ರಾಜಸ್ಥಾನದಲ್ಲಿ ಸ್ವಂತ ಪತ್ರಿಕೆ ನಡೆಸುತ್ತಿರುವ ರಾಜೇಂದ್ರ ವ್ಯಾಸ್‌ ಎನ್ನುವವರೇ ಅಪಘಾತದಲ್ಲಿ ಗಾಯಗೊಂಡಿದ್ದವರು. ವ್ಯಾಸ್‌ ಕೇಂದ್ರ ದೆಹಲಿಯ ಹುಮಾಯುನ್‌ ರಸ್ತೆಯಲ್ಲಿ ತಮ್ಮ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಕಾರ್‌ವೊಂದು ಡಿಕ್ಕಿ ಹೊಡೆದಿತ್ತು. ಈ ವೇಳೆ ಅವರ ಹಣೆ ಭಾಗಕ್ಕೆ ಗಾಯವಾಗಿತ್ತು. ಸ್ಕೂಟರ್‌ಗೂ ಹಾನಿಯಾಗಿತ್ತು. ಅದೇ ಮಾರ್ಗದಲ್ಲಿ ಸಾಗುತ್ತಿದ್ದ ರಾಹುಲ್‌ ಅಪಘಾತವಾಗಿರುವುದನ್ನು ಗಮನಿಸಿ ವ್ಯಾಸ್‌ ಅವರನ್ನು ತಮ್ಮ ಕಾರಿನಲ್ಲೇ ಏಮ್ಸ್‌(ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ) ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.

Embedded video

Vivek Barmeri@Viveksbarmeri

@INCIndia अध्यक्ष @RahulGandhi ने घायल पत्रकार राजेन्द्र व्यास की मदद कर दिया इंसानियत का परिचय, सच दयालु व्यक्ति है राहुल गांधी @ashokgehlot51 @SachinPilot @priyankac19 @rssurjewala @VineetPunia @pranavINC

1,133

5:12 PM - Mar 27, 2019

538 people are talking about this

Twitter Ads info and privacy

ರಾಹುಲ್‌ ಗಾಂಧಿ ಗಾಯಾಳುವನ್ನು ಪಕ್ಕದಲ್ಲಿ ಕೂರಿಸಿ ಉಪಚರಿಸುತ್ತಿರುವ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا