Urdu   /   English   /   Nawayathi

ಅಲಹಾಬಾದಿನಿಂದ ವಾರಣಾಸಿಗೆ ಪ್ರಿಯಾಂಕ ಗಾಂಧಿ ದೋಣಿ ಯಾತ್ರೆ

share with us

ಅಲಹಾಬಾದ್: 18 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಕಾಂಗ್ರೆಸ್‍ನ ಸ್ಟಾರ್ ಪ್ರಚಾರಕಿ ಎಂದೇ ಬಿಂಬಿತರಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಉತ್ತರಪ್ರದೇಶದಲ್ಲಿ ಇಂದಿನಿಂದ ಮೂರು ದಿನಗಳ ಬಿರುಸಿನ ಚುನಾವಣಾ ಪ್ರಚಾರಕ್ಕೆ ಆರಂಭಿಸಿದ್ದಾರೆ. ಅಲಹಾಬಾದ್‍ನ ಧಾರ್ಮಿಕ ಕ್ಷೇತ್ರ ಪ್ರಯಾಗ್‍ರಾಜ್‍ನ ಸಂಗಮ್ ಬಳಿ ಹನುಮಾನ್ ದೇವಾಲಯಕ್ಕೆ ಇಂದು ಮುಂಜಾನೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಪ್ರಿಯಾಂಕಾ ವಿದ್ಯುಕ್ತ್ ಪ್ರಚಾರಾಂದೋಲನಕ್ಕೆ ಚಾಲನೆ ನೀಡಿದರು. ಮೂರು ದಿನಗಳ ಅವಧಿಯಲ್ಲಿ ಪ್ರಿಯಾಂಕಾ ಅಲಹಾಬಾದ್‍ನಿಂದ ವಾರಣಾಸಿವರೆಗೆ ಗಂಗಾ ನದಿಯಲ್ಲಿ ವಿಶೇಷ ದೋಣಿ ಮೂಲಕ 100ಕ್ಕೂ ಹೆಚ್ಚು ಕಿ.ಮೀ ಸಂಚಾರ ನಡೆಸಿ ಬಿರುಸಿನ ಪ್ರಚಾರ ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ ವಿವಿಧ ಧಾರ್ಮಿಕ ಸ್ಥಳಗಳಲ್ಲಿ ಪ್ರಿಯಾಂಕಾ ಪ್ರಚಾರ ನಡೆಸಿತ್ತಿರುವುದು ಭಾರೀ ಕುತೂಹಲ ಕೆರಳಿಸಿದೆ. ಪ್ರಿಯಾಂಕ ಅವರೊಂದಿಗೆ ಕಾಂಗ್ರೆಸ್‍ನ ಹಿರಿಯ ನಾಯಕರು ಸಹ ಅಲಹಾಬಾದ್ ಮತ್ತು ವಾರಣಾಸಿಯಲ್ಲಿ ಅಬ್ಬರದ ಪ್ರಚಾರ ಕೈಗೊಳ್ಳುವರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا