Urdu   /   English   /   Nawayathi

ಆಂಧ್ರದಲ್ಲಿ ಜೋರಾದ ಚುನಾವಣಾ ಕಾವು... ಪ್ರಚಾರಕ್ಕೆ ಹೋದ ಟಿಡಿಪಿ ಅಭ್ಯರ್ಥಿ, ಎಎಸ್​ಐಗೆ ಗುಂಡೇಟು!

share with us

ಕರ್ನೂಲ್​: 16 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಆಂಧ್ರಪ್ರದೇಶದಲ್ಲಿ ಚುಣಾವಣಾ ಕಾವು ಬಲು ಜೋರಾಗಿದೆ. ಪ್ರಚಾರಕ್ಕೆ ತೆರಳಿದ್ದ ಅಭ್ಯರ್ಥಿಗೆ ಗುಂಡೇಟು ಬಿದ್ದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಮಂತ್ರಾಲಯ ತಾಲೂಕಿನ ಖಗ್ಗಲ್​ ಗ್ರಾಮದಲ್ಲಿ ತೆಲುಗು ದೇಶಂ ಪಾರ್ಟಿ ಅಭ್ಯರ್ಥಿ ತಿಕ್ಕಾರೆಡ್ಡಿ ಪ್ರಚಾರಕ್ಕೆ ಆಗಮಿಸಿದ್ದರು. ಈ ವೇಳೆ ಯುವಜನ ಶ್ರಮಿಕ ರೈತು ಕಾಂಗ್ರೆಸ್​ ಪಕ್ಷದವರು ಅಡ್ಡಿಪಡಿಸಿದ್ದಾರೆ. ಇಬ್ಬರ ಮಧ್ಯೆ ಘರ್ಷಣೆ ನಡೆದಿದೆ. ಇನ್ನು ಎರಡು ಪಕ್ಷಗಳ ಮಧ್ಯೆ ಜಗಳವಾಗಿದ್ದು, ಟಿಡಿಪಿ ಅಭ್ಯರ್ಥಿ ತಿಕ್ಕಾರೆಡ್ಡಿ ಗನ್​ಮ್ಯಾನ್​ ಗಾಳಿಯಲ್ಲಿ ಐದು ಬಾರಿ ಗುಂಡು ಹಾರಿಸಿದ್ದಾರೆ. ಆದ್ರೆ ಈ ಗುಂಡು ಟಿಡಿಪಿ ಅಭ್ಯರ್ಥಿ ತಿಕ್ಕಾರೆಡ್ಡಿ ಕಾಲಿಗೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಲ್ಲಿ ಮಾಧವರಂ ಎಎಸ್​ಐ ವೇಣುಗೋಪಾಲ್​ರಿಗೂ ಗುಂಡೇಟು ಬಿದ್ದಿದ್ದು, ಅವರನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಿಂದ ಗ್ರಾಮದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಬಿಗಿ ಪೊಲೀಸ್​ ಬಂದೋಬಸ್ತ್​ ಕೈಗೊಳ್ಳಲಾಗಿದೆ. 

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا