Urdu   /   English   /   Nawayathi

ಹಣ ಕೊಡಲು ನಿರಾಕರಿಸಿದ ಕಾರಣ ತನ್ನ ನೆರೆಯಲ್ಲಿದ್ದ ಮಹಿಳೆಯನ್ನು ಕೊಂದ ಆರೋಪಿ

share with us

ಕುಂದಾಪುರ: 13 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಕುಂದಾಪುರ ತಾಲೂಕಿನ ಹೆಮ್ಮಾಡಿಯಲ್ಲಿ ಮಾರ್ಚ್ 1ರಂದು ಗುಲಾಬಿ ಎಂಬಾಕೆಯ ಕೊಲೆ ನಡೆದಿತ್ತು. ಈ ಪ್ರಕರಣದ ಕಾರ್ಯಾಚರಣೆ ನಡೆಸುತ್ತಿದ್ದ ಪೋಲೀಸರು ತಂಡ ರಚಿಸಿ ಸಿದ್ದಾಪುರದಲ್ಲಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಸೆಳ್ಕೋಡು ಕುಂಟುಮಾವಿನ ನಿವಾಸಿ ರವಿರಾಜ(31) ಎಂದು ಹೇಳಲಾಗಿದೆ. ಮಾರ್ಚ್ 1ರಂದು ಆರೋಪಿ ಗುಲಾಬಿಯ ಮನೆಗೆ ತೆರಳಿ ತನಗೆ 50,000 ರೂಪಾಯಿ ಸಾಲ ಬೇಕೆಂದು ಕೇಳಿದ್ದಾನೆ. ಹಣ ಕೊಡಲು ಗುಲಾಬಿ ನಿರಾಕರಿಸಿದ್ದು, ತನಗೆ ಮಾರ್ಚ್ 2ರಂದು ಬೇರೊಬ್ಬರಿಗೆ ತಾನು ಪಡೆದುಕೊಂಡ ಸಾಲ ಕೊಡಬೇಕು ಎಂದು ಪೀಡಿಸಿದ್ದಾನೆ. ಆದರೂ ನಿರಾಕರಿಸಿದ ಗುಲಾಬಿಯ ಮನೆಯ ಹೊರಗೆ ಕುಳಿತು ಆಕೆ ಹೊರ ಬರುವುದನ್ನು ನಿರೀಕ್ಷಿಸುತ್ತಿದ್ದ ಆರೋಪಿ ಗುಲಾಬಿ ಬಹಿರ್ದೆಸೆಗೆಂದು ಹೊರಗೆ ಬಂದಾಗ ಮತ್ತೆ ಪೀಡಿಸಿದ್ದಾನೆ. ನಂತರ ಗುಲಾಬಿ ರವಿ ರಾಜನನ್ನು ಮನೆಗೆ ಹೋಗು ಎಂದು ಗದರಿಸಿದರೂ ಆತ ಕೇಳದ ಕಾರಣ ನೀನು ಶಿವರಾಮನ ಜೊತೆ ಮಾತನಾಡಿ ಒಪ್ಪಿಸಿದರೆ ನಾನು ಹಣ ಕೊಡುತ್ತೇನೆ ಎಂದು ಹೇಳಿ ಅಲ್ಲಿಂದ ಹೊರಟಿದ್ದಾಳೆ. ರಾತ್ರಿಯ ವೇಳೆ ಗುಲಾಬಿ ಬಹಿರ್ದೆಸೆಗೆಂದು ತೆರಳಿ ಮನೆಯ ಕಡೆಗೆ ಮರಳಿ ಬರುವಾಗ ಆರೋಪಿ ಆಕೆಯನ್ನು ಶಾಲಿನಿಂದ ಕುತ್ತಿಗೆ ಹಿಸುಕಿ ಕೊಂದಿದ್ದಾನೆ ಎನ್ನಲಾಗಿದೆ. ಕೊಲೆಯ ನಂತರ ಆಕೆಯ ಬಳಿ ಇದ್ದ ಚಿನ್ನದ ಉಂಗುರ, ಕಿವಿಯೋಲೆ, ಸರ ಮತ್ತು ಬಳೆಗಳನ್ನು ಕದ್ದು ಅಲ್ಲಿಂದ ಪರಾರಿಯಾಗಿದ್ದ. ಆರೋಪಿಯನ್ನು ಪೋಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದಾಗ 50,000 ರೂಪಾಯಿ ಕೊಡಲು ನಿರಾಕರಿಸಿದ ಕಾರಣ ತಾನು ಆಕೆಯನ್ನು ಕೊಂದಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.

ವರದಿಗಳ ಪ್ರಕಾರ ಗುಲಾಬಿ ರವಿ ರಾಜನ ಮನೆಯ ನೆರೆಯಲ್ಲಿಯೇ ವಾಸವಾಗಿದ್ದು, ಆರೋಪಿಯ ಪತ್ನಿ ಹಾಗೂ ಗುಲಾಬಿಯ ನಡುವೆ ಒಳ್ಳೆಯ ಸ್ನೇಹ ಕೂಡ ಇತ್ತು ಎಂದು ಹೇಳಲಾಗಿದೆ. ವಿಷಯ ತಿಳಿದ ರವಿರಾಜನ ಪತ್ನಿ ತನ್ನ ಪತಿ ಕೊಲೆ ಮಾಡಿರುವುದಾಗಿ ನಂಬದೇ ಆತ ನಿರಪರಾಧಿ ಎಂದೇ ವಾದಿಸಿದ್ದಾಳೆ. ಕೊನೆಗೆ ರವಿರಾಜ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದ ನಂತರ ನೊಂದು ಆತನ ಮೇಲೆ ಕನಿಕರ ತೋರದೇ ಅಲ್ಲಿಂದ ನಿರಾಶೆಯಿಂದ ಮನೆಗೆ ತೆರಳಿದ್ದಾಳೆ ಎನ್ನಲಾಗಿದೆ.

Prayer Timings

Fajr فجر
Dhuhr الظهر
Asr أسر
Maghrib مغرب
Isha عشا