Urdu   /   English   /   Nawayathi

ಸಾವಿನಲ್ಲಿ ಸಾರ್ಥ್ಯಕ್ಯ ಮೆರೆದ ಬೆಂಗಳೂರಿನ ಯುವಕ; ದೇಹದ ಅಂಗಾಂಗ ದಾನ

share with us

ಬೆಂಗಳೂರು: 06 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಅಪಘಾತವಾದ ನಂತರ ಮೆದುಳು ನಿಷ್ಕ್ರಿಯಗೊಂಡ 28 ವರ್ಷದ ಯುವಕನ ದೇಹದ ಪ್ರಮುಖ ಅಂಗಾಂಗಗಳನ್ನು 5 ಜನಕ್ಕೆ ದಾನ ಮಾಡಲಾಗಿದೆ. ಕಳೆದ ಭಾನುವಾರ ವೆಲ್ಲೂರ್ ಜಂಕ್ಷನ್ ಬಳಿ ಅಶೋಕ್ ಕುಮಾರ್ ಎಂಬುವವರಿಗೆ ತಲೆಗೆ ತೀವ್ರ ಏಟಾಗಿ ಬನ್ನೇರುಘಟ್ಟದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರ ಮೆದುಳು ನಿಷ್ಕ್ರಿಯವಾಗಿ ಮೃತಪಟ್ಟಿದ್ದರು. ಅವರ ದೇಹದ ಅಂಗಾಂಗಗಳಾದ ಹೃದಯ, ಕಿಡ್ನಿ ಮತ್ತು ಕಾರ್ನಿಯಾಗಳನ್ನು ದಾನ ಮಾಡಲು ಅವರ ಪತ್ನಿ ಮುಂದೆ ಬಂದಿದ್ದಾರೆ. ದೇಹದ ಅಂಗಾಂಗಗಳನ್ನು ಸಾಗಿಸಲು ಫೋರ್ಟಿಸ್ ಆಸ್ಪತ್ರೆಯಿಂದ ಬನ್ನೇರುಘಟ್ಟ ರಸ್ತೆಯ ಮೂಲಕ ಎಂ ಎಸ್ ರಾಮಯ್ಯ ಆಸ್ಪತ್ರೆಗೆ ಸಾಗಿಸಲು ಗ್ರೀನ್ ಕಾರಿಡಾರ್ ನಿರ್ಮಿಸಲಾಗಿದೆ. ಅಂದರೆ ತೀವ್ರ ಅನಾರೋಗ್ಯದಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ರೋಗಿಗಳಿಗೆ ನಾಲ್ಕು ಗಂಟೆಗಳೊಳಗೆ ಅಂಗಾಂಗವನ್ನು ತಲುಪಿಸುವುದಕ್ಕೆ ಆಂಬ್ಯುಲೆನ್ಸ್ ಮಾತ್ರ ಆ ಸಮಯದಲ್ಲಿ ಸಂಚರಿಸಲು ಹಾದಿ ಮಾಡಿಕೊಡುವುದಾಗಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا