Urdu   /   English   /   Nawayathi

ಕೈ ಮುಖಂಡರ ಜೊತೆ ಕೆಲಸ ಮಾಡ್ತಿದ್ದ ಇಬ್ಬರು ಯುವಕರ ಮೇಲೆ ಹಲ್ಲೆ

share with us

ಬೆಂಗಳೂರು: 05 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಕಾಂಗ್ರೆಸ್​​ ಮುಖಂಡರ ಜೊತೆ ಕೆಲಸ ಮಾಡುತ್ತಿದ್ದಾರೆಂದು ಹತ್ತು ಜನರ ತಂಡ ಇಬ್ಬರು ಯುವಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕೋಡಿಹಳ್ಳಿ ಗ್ರಾಮದ್ಲಲ್ಲಿ ನಡೆದಿದೆ. ಹೊಸಕೋಟೆ ತಾಲೂಕಿನ ಕೋಡಿಹಳ್ಳಿ ಗ್ರಾಮದ ಕಾರ್ತಿಕ್ (19), ನವೀನ್ (24) ಹಲ್ಲೆಗೊಳಗಾದ ಯುವಕರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.ಈ ಇಬ್ಬರು ಯುವಕರು ಅದೇ ಕೋಡಿಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡ ಜಾನಾರ್ಧನ್ ಅವರ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಆದರೆ ಅದೇ ಕೋಡಿಹಳ್ಳಿ ಗ್ರಾಮದ ಬಿಜೆಪಿ ಪಕ್ಷದ ಪ್ರಭಾವಿ ನಾಯಕ ಸೊಣ್ಣಪ್ಪನವರ ಪುತ್ರ ಸುರೇಶ್ ಹಲ್ಲೆಗೊಳಗಾದ ಯುವಕರಿಗೆ ಅಲ್ಲಿ ಕೆಲಸ ಮಾಡಬೇಡಿ ಅಂತ ಬೆದರಿಕೆ ಒಡ್ಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಹಾಗಾಗಿ ಸುರೇಶ್​​ ಸಹಚರರು ರಾತ್ರಿ ಚಾಕು, ಡ್ರಾಗರ್​​​ನಿಂದ ತಿವಿದು ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ದೂರಲಾಗಿದೆ. ಈ ಹಿನ್ನೆಲೆ ಸುನಿಲ್, ಗಜೇಂದ್ರ, ನಾರಾಯಣಸ್ವಾಮಿ, ಮಂಜುನಾಥ, ಗಿರೀಶ್, ಮುರಳಿ ಅವರ ಹುಡುಕಾಟಕ್ಕೆ ತಿರುಮಲ ಶೆಟ್ಟಿಹಳ್ಳಿ ಪೊಲೀಸರು ಮುಂದಾಗಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا