Urdu   /   English   /   Nawayathi

ಮನೆ ಮಾಲೀಕನನ್ನು ಕಟ್ಟಿಹಾಕಿ 80 ಲಕ್ಷ ಹಣ, 1 ಕೆಜಿ ಚಿನ್ನ ದೋಚಿದ್ದ ಕಳ್ಳರು ಅರೆಸ್ಟ್

share with us

ಹಾಸನ: 05 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಬೆಲಿಯೇ ಎದ್ದು ಹೊಲ ಮೈದಂತೆ ಮನೆ ಯಜಮಾನನ್ನೇ ಕೆಲಸಗಾರರು ಕಟ್ಟಿಹಾಕಿ ಲಕ್ಷಾಂತರ ರೂ. ಹಣ ಹಾಗೊ ಚಿನ್ನಾಭರಣ ದೋಚಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಎಸ್‍ಪಿ ಡಾ.ಎ.ಎನ್.ಪ್ರಕಾಶ್‍ಗೌಡ, ನಗರದ ಅಜಾದ್ ರಸ್ತೆಯಲ್ಲಿ ಇರುವ ಆಂತೋಣಿ ಅವರ ಮನೆಯಲ್ಲಿ ಕೆಲಸಕ್ಕೆ ಇದ್ದ ರಾಜಿಸ್ಥಾನ ಮೂಲದ ಆಕಾಶ್, ಲಕ್ಷ್ಮಣ ಸೇರಿದಂತೆ ಆರು ಮಂದಿ ಸೇರಿ ಮಾಲೀಕನನ್ನು ಕಟ್ಟಿಹಾಕಿ ಮನೆಯಲ್ಲಿದ್ದ 80 ಲಕ್ಷ ರೂ. ಹಣ ಹಾಗೂ ಸುಮಾರು ಒಂದು ಕೆಜಿ ಚಿನ್ನಾಭರಣ ದೋಚಿದ್ದಾರೆ ಎಂದರು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಆಕಾಶ್ , ಗಣಪತ್ ಹಾಗೂ ಲಕ್ಷ್ಮಣ  ತಲೆಮರೆಸಿಕೊಂಡಿದ್ದು ಇವರಿಗೆ ಸಹಕಾರ್ ನೀಡಿದ ಐದು ಮಂದಿ ಆರೋಪಿಗಳಾದ ಸಂತೋಷ್, ರತತ್‍ಸಿಂಗ್ ,ಇಂದ್ರಸಿಂಗ್ , ರಾಮರಾಂ ದೇವಸಿ, ಮೀಟೂ ಸಿಂಗ್ ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಮುಖ ಮೂವರು ಆರೋಪಿಗಳ ಪತ್ತೆಗೆ ಕಾರ್ಯ ಚರಣೆ ಮುಂದುವರಿದಿದೆ ಎಂದು ತಿಳಿಸಿದರು. ಪ್ರಕರಣ ಭೇದಿಸುವಲ್ಲಿ ಶ್ರಮಿಸಿದ ಉಪ-ಅಧೀಕ್ಷಕ ಪುಟ್ಟಸ್ವಾಮಗೌಡ, ಸಿಪಿಐ ಸತ್ಯನಾರಾಯಣ, ಪಿಎಸ್‍ಐ ಪ್ರಮೋದ್ ಕುಮಾರ್ , ಪಿಎಸ್‍ಐ ಸುರೇಶ್ ಕುಮಾರ್ ತಂಡಕ್ಕೆ 25 ಸಾವಿರ ಬಹುಮಾನ ನೀಡಲಾಗಿದೆ ಎಂದು ಪ್ರಕಾಶ್ ಗೌಡ ಇದೇ ಸಂದರ್ಭದಲ್ಲಿ ಹೇಳಿದರು.

ಈ, ಸಂ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا