Urdu   /   English   /   Nawayathi

ಕಾರು ಕೊಡಿಸುವುದಾಗಿ ಜನರನ್ನು ವಂಚಿಸಿದ್ದ ಆರೋಪಿ ಅಂದರ್​

share with us

ಬೆಂಗಳೂರು: 04 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಕಾರು ಕೊಡಿಸುವ ನೆಪದಲ್ಲಿ ಜನರನ್ನು ವಂಚಿಸುತ್ತಿದ್ದ ಕುಖ್ಯಾತ ಖದೀಮನನ್ನು ಬಂಧಿಸುವಲ್ಲಿ ಬಸವನಗುಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ದಿನೇಶ್  ಬಂಧಿತ ಆರೋಪಿ. ಕಡಿಮೆ ಬೆಲೆಗೆ ಹಾಗೂ ಬಾಡಿಗೆಗೆ ಕಾರುಗಳನ್ನು ಕೊಡಿಸುತ್ತೇನೆ. ಐಟಿ ಕಂಪನಿಗಳಿಗೆ ಬಿಡುತ್ತೇನೆ ಎಂದು ನೂರಾರು ಜನರಿಗೆ ವಂಚಿಸಿ ಪೊಲಿಸರಿಗೆ ಚಳ್ಳೆಹಣ್ಣು ತಿನ್ನಿಸಿ ಈತ ಪಾರಾರಿಯಾಗುತ್ತಿದ್ದ ಇಂದು ಪೊಲೀಸ್​​ ಕೈ ಸೇರಿದ್ದಾನೆ. ಈತನ ವಿರುದ್ಧ ಚಂದ್ರ ಲೇಔಟ್​ನಲ್ಲಿ‌ 45, ಬಿಡಯಲ್ಲಿ 50, ಬಸವನಗುಡಿ ಸೇರಿದಂತೆ ಅನೇಕ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆ ಬಸವನಗುಡಿ ಪೊಲೀಸರು ಕಾರ್ಯಚರಣೆ ಕೈಗೊಂಡು ಆರೊಪಿಯನ್ನ ಖೆಡ್ಡಾಕ್ಕೆ ಕೆಡವುದರಲ್ಲಿ ಯಶಸ್ವಿಯಾಗಿದ್ದಾರೆ. ಈತ ಹಣ ಗಳಿಸಬೇಕೆಂಬ ಉದ್ದೇಶದಿಂದ ಈತ ಕೊಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಮಾಹಿತಿ ತನಿಖೆಯಿಂದ ಬೆಳಕಿಗೆ ಬಂದಿದೆ. ಸದ್ಯ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ತನಿಖೆ ಮುಂದುವರೆದಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا