Urdu   /   English   /   Nawayathi

ನೀವು ಉರುಳಿಸಿದ್ದು ಉಗ್ರರನ್ನೋ, ಮರಗಳನ್ನೋ ? ನವಜೋತ್‌ ಸಿಂಗ್‌ ಲೇವಡಿ

share with us

ಹೊಸದಿಲ್ಲಿ : 04 ಮಾರ್ಚ್ (ಫಿಕ್ರೋಖಬರ್ ಸುದ್ದಿ) "ನೀವು ಉರುಳಿಸಿದ್ದು ಉಗ್ರರನ್ನೋ, ಮರಗಳನ್ನೋ?'' ಎಂದು ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿಧು ಅವರು ಭಾರತೀಯ ವಾಯು ಪಡೆ ದಾಳಿಯಲ್ಲಿ ಹತರಾದ ಉಗ್ರರ ಸಂಖ್ಯೆಯನ್ನು ಪ್ರಶ್ನಿಸಿ ಲೇವಡಿ ಮಾಡಿದ್ದಾರೆ. "300 ಉಗ್ರರು ಹತರಾಗಿದ್ದಾರೆ-ಹೌದೋ ಅಲ್ಲವೋ? ಹಾಗಿದ್ದರೆ ಅದರ ಉದ್ದೇಶವೇನು? ನೀವು ಉರುಳಿಸಿದ್ದು ಉಗ್ರರನ್ನೋ ಮರಗಳನ್ನೋ? ಇದು ಚುನಾವಣೆಯ ಗಿಮಿಕ್ಕಾ? ವಿದೇಶೀ ಶತ್ರುವನ್ನು ಸಂಹರಿಸಿರುವ ವಿಷಯದಲ್ಲಿ ಸತ್ಯವನ್ನೇ ಮರೆಮಾಚುವ ಟ್ರಿಕ್‌ ನಮ್ಮ ದೇಶದಲ್ಲಿ ನಡೆದಿದೆ; ಸೇನೆಯ ರಾಜಕೀಕರಣ ನಡೆಸುವುದನ್ನು ನಿಲ್ಲಿಸಿ; ಸೇನೆಯು ಸರಕಾರಕ್ಕಿಂತ ಪವಿತ್ರವಾದದ್ದು' ಎಂದು ನವಜೋತ್‌ ಸಿಂಗ್‌ ಸಿಧು ಇಂದು ಸೋಮವಾರ ಟ್ವೀಟ್‌ ಮಾಡಿದ್ದಾರೆ. ಪಾಕ್‌ ಮೂಲದ ಜೈಶ್‌ ಎ ಮೊಹಮ್ಮದ್‌ ಸಂಘಟನೆಗೆ ಸೇರಿದ ಉಗ್ರನಿಂದ ಪುಲ್ವಾಮಾ ದಾಳಿ ನಡೆದು 40 ಸಿಆರ್‌ಪಿಎಫ್ ಯೋಧರು ಬಲಿಯಾಗಿದ್ದಾಗ ಇದೇ ನವಜೋತ್‌ ಸಿಂಗ್‌ ಸಿಧು, "ಒಬ್ಬ ಉಗ್ರ ನಡೆಸಿದ ದಾಳಿಗೆ ಒಂದು ದೇಶವಾಗಿ ಪಾಕಿಸ್ಥಾನವನ್ನು ದೂರಲಾಗದು'' ಎಂಬ ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿ ವ್ಯಾಪಕ ಟೀಕೆ, ಖಂಡನೆಗೆ ಗುರಿಯಾಗಿದ್ದರು. ಈಗ ಪುನಃ ಅದೇ ಸಿಧು, ಐಎಎಫ್ ದಾಳಿಯಲ್ಲಿ 250ಕ್ಕೂ ಅಧಿಕ ಉಗ್ರರು ಸತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿರುವ ಮಾತನ್ನು ಟೀಕಿಸಿ, ಐಎಎಫ್ ದಾಳಿಯನ್ನು ಲಘುವಾಗಿ ಕಾಣುವ ಮೂಲಕ ಮತ್ತೆ ವಿವಾದ ಸೃಷ್ಟಿಸಿದ್ದಾರೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا