Urdu   /   English   /   Nawayathi

ಉಪ್ಪಿನಂಗಡಿಯ ಕೂಟೇಲು ಬಳಿ ಯುವಕನ ಕೊಲೆ!

share with us

ಮಂಗಳೂರು: 03 ಮಾರ್ಚ್ (ಫಿಕ್ರೋಖಬರ್ ಸುದ್ದಿ) ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಕೂಟೇಲು ಎಂಬಲ್ಲಿ ಯುವಕನೋರ್ವನ ಕೊಲೆಯಾಗಿದೆ. ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಕಲ್ಲಾಪುವಿನ ಯಶವಂತ(19)  ಕೊಲೆಯಾದ ಯುವಕ. ಉಪ್ಪಿನಂಗಡಿ ಕೂಟೇಲು ನದಿ‌ಕಿನಾರೆ ಬಳಿ ಯಶವಂತನಿಗೆ ಆನಂದ ವಗ್ಗ ಎಂಬಾತ ಚೂರಿ ಇರಿದಿದ್ದಾನೆ ಎನ್ನಲಾಗ್ತಿದೆ. ಕೊಲೆ ನಡೆದ ಸ್ಥಳದ ಸಮೀಪದಲ್ಲೇ ಉಪ್ಪಿನಂಗಡಿ ಕಂಬಳ ನಡೆಯುತ್ತಿತ್ತು. ಇನ್ನು ಚೂರಿ ಇರಿತದಿಂದ ಗಂಭೀರ ಗಾಯಗೊಂಡಿದ್ದ ಯಶವಂತನನ್ನು ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ದಾರಿ ಮಧ್ಯೆ ‌ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا