Urdu   /   English   /   Nawayathi

ಆಡಿನ ಮೇಲೆ ಹರಿದ ಶಾಲಾ ಬಸ್ಸಿಗೆ ಕಲ್ಲೆಸೆತ; 9 ವಿದ್ಯಾರ್ಥಿಗಳಿಗೆ ಗಾಯ

share with us

ಇಂದೋರ್‌: 02 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಶಾಲಾ ಬಸ್ಸೊಂದು ಆಡಿನ ಮೇಲೆ ಹರಿದು ಅದರ ಸಾವಿಗೆ ಕಾರಣವಾದುದಕ್ಕೆ  ಸಿಟ್ಟಿಗೆದ್ದ ಗ್ರಾಮಸ್ಥರು ಬಸ್ಸಿಗೆ ಕಲ್ಲು ಹೊಡೆದ ಕಾರಣ ಒಂಬತ್ತು ಮಂದಿ ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಇಂದೋರ್‌ ಜಿಲ್ಲೆಯ ಕಾಜಿ ಪಲಾಸಿಯಾ ಗ್ರಾಮದಲ್ಲಿ ನಡೆದಿದೆ. ಶಾಲಾ ಬಸ್ಸಿನ ಬ್ರೇಕ್‌ ಫೇಲ್‌ ಆದ ಕಾರಣ ಅದರ ಚಾಲಕನಿಗೆ ನಿಯಂತ್ರಣ ತಪ್ಪಿತ್ತು. ಆದ ಕಾರಣ ಅದು ಆಡಿನ ಮೇಲೆ ಹರಿದಾಗ ಅದು ಅಪ್ಪಚ್ಚಿಯಾಯಿತು. ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಬಸ್‌ ಚಾಲಕನೊಡನೆ ಮಾತಿನ ಜಗಳಕ್ಕಿಳಿದು ಅದರ ಪರಾಕಾಷ್ಠೆಯಲ್ಲಿ ಬಸ್ಸಿಗೆ ಕಲ್ಲು ಹೊಡೆದರು. ಇದರ ಪರಿಣಾಮವಾಗಿ ಗಾಯಗೊಂಡ 9 ಮಂದಿ ವಿದ್ಯಾರ್ಥಿಗಳನ್ನು ಒಡನೆಯೇ ಮಹಾರಾಜ ಯಶವಂತ ರಾವ್‌ ಆಸ್ಪತ್ರೆಗೆ ಒಯ್ದು ಅಲ್ಲಿ ಚಿಕಿತ್ಸೆ ನೀಡಲಾಗಿ ಬಳಿಕ ಬಿಡುಗಡೆಗೊಳಿಸಲಾಯಿತು ಎಂದು ಆಸ್ಪತ್ರೆ ಸುಪರಿಂಟೆಂಡೆಂಟ್‌ ಪಿ ಎಸ್‌ ಠಾಕೂರ್‌ ತಿಳಿಸಿದರು. ಪೊಲೀಸರು  13 ಮಂದಿಯ ವಿರುದ್ಧ  ಕೇಸು ದಾಖಲಿಸಿಕೊಂಡು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا