Urdu   /   English   /   Nawayathi

ಮಹಾಮೈತ್ರಿಯಲ್ಲಿ ಉಂಟಾಯಿತಾ ಮಹಾಬಿರುಕು....? ಪ್ರತಿಪಕ್ಷಗಳ ಮೀಟಿಂಗ್​ಗೆ ಎಡಪಕ್ಷಗಳು ಗೈರು

share with us

ನವದೆಹಲಿ: 25 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಪ್ರಧಾನಿ ನರೇಂದ್ರ ಮೋದಿ ಅವರನ್ನ ಈ ಬಾರಿ ಹೇಗಾದರೂ ಮಾಡಿ ಅಧಿಕಾರದಿಂದ ಕೆಳಗಿಳಿಸಲೇಬೇಕು ಎಂಬ ಹಠ ತೊಟ್ಟಿರುವ ಕಾಂಗ್ರೆಸ್​ ನೇತೃತ್ವದ ಪ್ರತಿಪಕ್ಷಗಳ ಒಕ್ಕೂಟ ಇದೇ 27ಕ್ಕೆ ಸಂಸತ್​ ಭವನದ ಅನಾಕ್ಸ್​ ಎಕ್ಸ್​ಟೆನ್ಷನ್​ ಕಟ್ಟಡದಲ್ಲಿ ಮಹಾಮೈತ್ರಿಕೂಟದ ಸಭೆ ಕರೆದಿದೆ. ಈ ಮಹಾಮೈತ್ರಿಕೂಟದ ಮಹತ್ವದ ಸಭೆಗೆ ಬಿಜೆಪಿಯ ಕಡು ವಿರೋಧಿ ಎಡಪಕ್ಷಗಳು ಹೋಗದಿರಲು ನಿರ್ಧರಿಸಿವೆ. ಎಡಪಕ್ಷಗಳ ಈ ನಿರ್ಧಾರ ಕುತೂಹಲಕ್ಕೆ ಕಾರಣವಾಗಿದೆ. ವಿಶೇಷ ಎಂದರೆ ಮೋದಿ ಮಣಿಸಲು ಕಾಂಗ್ರೆಸ್​ ನೇತೃತ್ವದ ಪ್ರತಿಪಕ್ಷಗಳ ಒಕ್ಕೂಟದಲ್ಲಿ ತೃಣಮೂಲ ಕಾಂಗ್ರೆಸ್​ ಸಹ ಇದೆ. ಪಶ್ಚಿಮಬಂಗಾಳದಲ್ಲಿ ಟಿಎಂಸಿಗೆ ಮೊದಲ ಎದುರಾಳಿಯೇ ಎಡಪಕ್ಷಗಳು ಈ ವೈರುಧ್ಯ ಮಹಾಮೈತ್ರಿಕೂಟದ ಮಿತ್ರ ಪಕ್ಷಗಳಿಗೆ ದೊಡ್ಡ ತೊಡಕಾಗಿ ಪರಿಣಮಿಸಿದೆ. ಫೆ. 27 ರಂದು ನಡೆಯುವ ಸಭೆಯಲ್ಲಿ ‘ಕಾಮನ್​ ಮಿನಿಮಮ್​ ಪ್ರೋಗ್ರಾಂ’ ಬಗ್ಗೆ ಚರ್ಚೆ ನಡೆಯುತ್ತದೆ. ಈ ಮಹತ್ವದ ಸಭೆಗೆ ಎಡಪಕ್ಷಗಳು ಚಕ್ಕರ್​ ಹಾಕುತ್ತಿರುವುದು ಭಾರಿ ಕುತೂಹಲ ಕೆರಳಿಸಿದೆ. 

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا