Urdu   /   English   /   Nawayathi

ಸೆಕೆ ಅಂತಾ ಕಿಟಕಿ, ಬಾಗಿಲು ತರೆದು ಮಲಗೋರೆ ಎಚ್ಚರ- ವಿಡಿಯೋ ನೋಡಿ

share with us

ಬೆಂಗಳೂರು: 24 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ)ರಾತ್ರಿ ಮಲಗಿದ್ದ ವೇಳೆ ಕಿಟಕಿ ಮೂಲಕ ಮಹಿಳೆಯ ಸರ ಕದ್ದು ಪರಾರಿಯಾಗಿರುವ ಘಟನೆ ಬನಶಂಕರಿ ಪೊಲೀಸ್‌ ಠಾಣಾ ವ್ಯಾಪ್ತಿಯ ಶಾಸ್ತ್ರಿ ನಗರದಲ್ಲಿ ನಡೆದಿದೆ. ಖದೀಮ ಸರ ಎಗರಿಸಿ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೇ ತಿಂಗಳ 20 ರಂದು ರಾತ್ರಿ ಶಾಸ್ತ್ರಿ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಮಂಜುವಾಣಿ ಎಂಬ ಮಹಿಳೆಯ ಸರ ಕದ್ದು ಖದೀಮ ಪರಾರಿಯಾಗಿದ್ದಾನೆ. ಅಂದು ರಾತ್ರಿ ಸೆಕೆ ಎಂದು ಕಿಟಕಿ ತೆಗೆದು ಮಲಗಿದ್ದಾಗ ಕಿಟಕಿಯ ಮೂಲಕ ಕೈಹಾಕಿ ಸರ ಕಿತ್ತಿದ್ದಾನೆ. ಒಂದೂವರೆ ಲಕ್ಷ ರೂ.ಮೌಲ್ಯದ 50 ಗ್ರಾಂ ಮಾಂಗಲ್ಯ ಸರ ಕದಿಯುತ್ತಿದ್ದಂತೆ‌ ಮಂಜುವಾಣಿ ಕಿರುಚಾಡಿಕೊಂಡಿದ್ದರು. ಘಟನಾ ಸ್ಥಳದಿಂದ ಸರಗಳ್ಳ ಎಸ್ಕೇಪ್ ಆಗುವ ದೃಶ್ಯ ಸಿಸಿಟಿವಿಯಲ್ಲಿ‌ ಸೆರೆಯಾಗಿದೆ. ಈ ಕುರಿತು ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯ ಆಧರಿಸಿ‌ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا