Urdu   /   English   /   Nawayathi

ಕಾಶ್ಮೀರಿ ವಿದ್ಯಾರ್ಥಿಗಳ ಮೇಲಿನ ಹಲ್ಲೆ: ಪ್ರಧಾನಿ ಮೌನ ಪ್ರಶ್ನಿಸಿದ ಒಮರ್ ಅಬ್ದುಲ್ಲಾ

share with us

ಜಮ್ಮು- ಕಾಶ್ಮೀರ: 21 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಪುಲ್ವಾಮಾ ನರಮೇಧಕ್ಕೆ ಪ್ರತೀಕಾರವಾಗಿ ಕಾಶ್ಮೀರದ ವಿದ್ಯಾರ್ಥಿಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ ಏನನ್ನೂ ಮಾತನಾಡದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.  ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಒಂದೆಡೆ ಸಂಸತ್ತು ಮತ್ತು ಆಸೆಂಬ್ಲಿ ಚುನಾವಣೆಗೆ ಸಿದ್ಧರಾಗಿ ಎಂದು ಹೇಳುತ್ತೀರಿ ಮತ್ತೊಂದೆಡೆ ರಾಜ್ಯದ ರಕ್ಷಣೆಯಲ್ಲಿ ಹೆಚ್ಚಿನ ಅರ್ಹತೆ ಪಡೆದಿಲ್ಲ ಎನ್ನುತ್ತೀರಾ? ಕಾಶ್ಮೀರಿ ಪ್ರತ್ಯೇಕತಾವಾದಿಗಳಿಗೆ ನೀಡಿದ್ದ ಭದ್ರತೆ ವಾಪಾಸ್ ಪಡೆದ ಕ್ರಮ ಹಿಂಜರಿತದ ಕ್ರಮವಾಗಿದೆ  ಎಂದರು. ಕಾಶ್ಮೀರಿಗಳು ಹಿಂಸೆ ಮತ್ತು ಭಯೋತ್ಪಾದನೆ ಪರವಾಗಿಲ್ಲ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂಬುದು ನಮ್ಮ ಮನವಿಯಾಗಿದೆ. ಮಾತುಕತೆ ಸಂಬಂಧ ಧ್ವನಿ ಎತ್ತಿದ್ದಾಗ ರಾಷ್ಟ್ರ ವಿರೋಧಿ ಪಟ್ಟ ಕಟ್ಟಲಾಗುತ್ತದೆ. ಆದರೆ, ಸೌದಿ ಅರಬೀಯಾದ ರಾಜರೊಂದಿಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ದ್ವೀಪಕ್ಷಿಯ ಮಾತುಕತೆ ಬಗ್ಗೆ ಉಭಯ ನಾಯಕರು ಮಾತನಾಡಿದ್ದಾರೆ ಎಂದು ಹೇಳಿದರು. ದಾಳಿಗೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಆದರೆ, ಪ್ರಸ್ತುತ ಸಂದರ್ಭದಲ್ಲಿ ಇಂತಹ ಪ್ರತಿಕ್ರಿಯೆ ನೀಡುವುದು ಸರಿಯಲ್ಲ, ಪುಲ್ವಾಮಾ ರೀತಿಯ ದಾಳಿಯನ್ನೇ ಉದ್ದೇಶವನ್ನಿಟ್ಟುಕೊಂಡು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬಾರದು ಎಂದು ಒಮರ್ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا